janadhvani

Kannada Online News Paper

ಕೆಮ್ಮಾರ ಮಸೀದಿಯಲ್ಲಿ ಪಂಚದಿನ ಧಾರ್ಮಿಕ ಉಪನ್ಯಾಸ

ಕೆಮ್ಮಾರ: ಇಲ್ಲಿನ ಮುಹ್ಯಿಯುದ್ದೀನ್ ಜುಮುಅ ಮಸ್ಜಿದ್ ನಲ್ಲಿ ಅಶೈಖ್ ಮುಹ್ಯಿಯುದ್ದೀನ್ ಅಬ್ದುಲ್ ಖಾದಿರ್ ಜೀಲಾನಿ (ಖ.ಸಿ.ಅ) ರವರ ಹೆಸರಿನಲ್ಲಿ ಪ್ರತೀ ವರ್ಷ ಆಚರಿಸಿಕೊಂಡು ಬರುತ್ತಿರುವ ಮೌಲೂದು ನೇರ್ಚೆಯ ಅಂಗವಾಗಿ ಐದು ದಿನಗಳ ಮತಪ್ರವಚನ ಕಾರ್ಯಕ್ರಮವು ದಿನಾಂಕ 1-4-2018 ರಿಂದ 5-4-2018ರವರೆಗೆ ಅಸ್ಸಯ್ಯದ್ ಕೆ.ಎಸ್.ಆಟಕೋಯ ತಂಙಳ್, ಕುಂಬೋಳ್ ಇವರ ಘನ ಅಧ್ಯಕ್ಷತೆಯಲ್ಲಿ ಕೆಮ್ಮಾರ ಮಸೀದಿ ವಠಾರದಲ್ಲಿ ನಡೆಯಲಿದೆ. ಪ್ರತೀ ದಿನ ರಾತ್ರಿ 8ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಸ್ಥಳೀಯ ಮುದರಿಸ್ ಹಾಫಿಳ್ ಮುಹಮ್ಮದ್ ಇಲ್ಯಾಸ್ ಸಖಾಫಿ, ಮಾಡನ್ನೂರು,ಬಹು: ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು, ದ.ಕ. ಜಿಲ್ಲಾ ಎಸ್ಸೆಸ್ಸಫ್ ಅಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ, ಬಹು:ಅಬ್ದುಲ್ ಜಬ್ಬಾರ್ ಸಖಾಫಿ ಪಾತೂರು ಹಾಗೂ ಕೊನೆಯ ದಿನ ಸ್ವಲಾಹುದ್ದೀನ್ ಸಖಾಫಿ ಮುಂತಾದವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.ಶುಕ್ರವಾರ ಮಹಾಸಭೆ ಹಾಗೂ ಶನಿವಾರ ಮದ್ಯಾಹ್ನ ಮೌಲಿದ್ ನೇರ್ಚೆ ನಡೆಯಲಿದೆ ಎಂದು ಕೆಮ್ಮಾರ ಮುಹ್ಯಿಯುದ್ದೀನ್ ಜುಮುಅ ಮಸ್ಜಿದ್ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com