janadhvani

Kannada Online News Paper

ಕೆ.ಸಿ.ರೋಡ್: ಕರ್ಷಕಶ್ರೀ ಹಾಲಿನ ಬೂತ್ ಶುಭಾರಂಭ

ಉಳ್ಳಾಲ: ಕೇರಳದ A. M. ಗ್ರೂಪ್ ಕಂಪನಿಯ
ಕರ್ಷಕಶ್ರೀ ಎಂಬ ಹೆಸರಿನ ದನದ ಶುದ್ಧ ಹಾಲಿನ ಉತ್ಪನ್ನಗಳ ಮಳಿಗೆಯು ತಲಪಾಡಿ
ಸಮೀಪದ ಕೆ. ಸಿ. ರೋಡ್ ನ ಐಮಾನ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ.

ಈಗಾಗಲೇ ಈ ಸಂಸ್ಥೆಯು ಕೇರಳದಲ್ಲಿ ದನದ ಶುದ್ಧ
ಹಾಲು, ತುಪ್ಪ, ಮೊಸರು ಮತ್ತು ಮಜ್ಜಿಗೆಯನ್ನು
ಮಾರುಕಟ್ಟೆಗೆ ತಂದಿದೆ. ಯಾವುದೇ ಕಲಬೆರಕೆಯಿಲ್ಲದೆ ಆರೋಗ್ಯ ಪೂರ್ಣ ಸುರಕ್ಷಿತದೊಂದಿಗೆ ಉತ್ತಮ ಗುಣಮಟ್ಟದ ತಾಜಾ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಲ್ಪಟ್ಟಿದೆ ಎಂದು ಕಂಪನಿಯ ಡಿಸ್ಟ್ರಿಬ್ಯೂಟರ್ ಪತ್ರಕರ್ತ ಮುಹಮ್ಮದ್ ಉಳ್ಳಾಲ್ ವಿವರಿಸಿದರು. ಸ್ಥಳೀಯ ವಿತರಕ ಇಸ್ಮಾಯಿಲ್ ಆಬಿ ಮತ್ತು ಯಾಸಿರ್ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com