janadhvani

Kannada Online News Paper

ಬೋಳಂತೂರು: ತಾಜುಲ್ ಉಲಮಾ ಅನುಸ್ಮರಣೆ- ಯಶಸ್ವಿಗೆ ಎಸ್ಸೆಸ್ಸೆಫ್ ಕಲ್ಲಡ್ಕ ಸೆಕ್ಟರ್ ಕರೆ

ಕಲ್ಲಡ್ಕ : ತಾಜುಲ್ ಉಲಮಾ ಮದರಸ ನಾರಂಕೊಡಿ ಬೋಳಂತೂರು ಇದರ ವತಿಯಿಂದ
ತಾಜುಲ್ ಉಲಮಾ, ಶಂಸುಲ್ ಉಲಮಾ, ಬೇಕಲ್ ಉಸ್ತಾದ್, ಕಣ್ಣಿಯತ್ ಉಸ್ತಾದ್, ನೂರುಲ್ ಉಲಮಾ ,ಶರಪುಲ್ ಉಲಮಾ, ಸುರಿಬೈಲು ಉಸ್ತಾದ್, ಪಿ.ಎ ಉಸ್ತಾದ್, ಪೋಸೊಟ್ ತಂಙಳ್ ಅನುಸ್ಮರಣೆ ಸಂಗಮವು ನಾಳೆ(ಜ.30) ಕ್ಕೆ ಅಬ್ದುಲ್ ರಝಾಕ್ ಸಖಾಪಿ ವೇದಿಕೆ ತಾಜುಲ್ ಉಲಮಾ ಮಾದರಸ ಸಭಾಂಗಣ ಬೋಳಂತೂರು ನಲ್ಲಿ ನಡೆಯಲಿದೆ.

ಸಂಜೆ 6:30 ಕ್ಕೇ ಬುರ್ದ ಮಜ್ಲಿಸ್ ನಡೆಯಲಿದ್ದು
ನಂತರ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಬಹು: ಶರಪುದ್ದೀನ್ ಫಾಳಿಲಿ ಮಲಪುರಂ ಮುಖ್ಯ ಭಾಷಣ ನಡೆಸಲಿದ್ದು, ಸಯ್ಯಿದ್ ಖುರ್ರತುಸ್ಸಾದಾತ್ ಕೂರ ತಂಙಳ್ ದುಆ ನೇತೃ ನೀಡಲಿದ್ದಾರೆ.
ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ರವರು ಅಧ್ಯಕ್ಷತೆ ವಹಿಸಲಿದ್ದು, ಅನೇಕ ಉಲಮಾ ಉಮಾರ ನೇತಾರರು ಭಾಗವಹಿಸಲಿದ್ದಾರೆ .
ಎಂದು ಕಲ್ಲಡ್ಕ ಸೆಕ್ಟರ್ ಅಧ್ಯಕ್ಷ ಮಹಮ್ಮದ್ ಮಜೀದ್ ಕದ್ಕಾರ್ ತಿಳಿಸಿದ್ದಾರೆ

error: Content is protected !! Not allowed copy content from janadhvani.com