janadhvani

Kannada Online News Paper

ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ: ವೆಸ್ಟ್ ಸಮಿತಿ ಅಸ್ತಿತ್ವಕ್ಕೆ

ಮಂಗಳೂರು: ಬಿಸಿರೋಡಿನ ಲಯನ್ಸ್ ಭವನದಲ್ಲಿ ಜ.24 ರಂದು ನಿರ್ದೇಶಕ ಮಂಡಳಿ ನಾಯಕರ ವೀಕ್ಷಣೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ(ವೆಸ್ಟ್)ಅಸ್ತಿತ್ವಕ್ಕೆ ತರಲಾಯಿತು.

ನಿರ್ದೇಶಕ ಮಂಡಳಿ ನಾಯಕರಾದ SP ಹಂಝ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ,PP ಅಹ್ಮದ್ ಸಖಾಫಿಕಾಶಿಪಟ್ನ ಉಸ್ತಾದರು ಉದ್ಘಾಟಿಸಿದರು. GM ಮುಹಮ್ಮದ್ ಕಾಮಿಲ್ ಸಖಾಫಿ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ MRD ಚೇರ್ ಮ್ಯಾನ್ ಸಿರಾಜುದ್ದೀನ್ ಸಖಾಫಿ ಕನ್ಯಾನ, ರಾಜ್ಯ ಮಾಜಿ ನಾಯಕರಾದ ಹಮೀದ್ ಬಜ್ಪೆ ಹಾಗೂ SYS ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಉಪಸ್ಥಿತರಿದ್ದರು.ಜಿಎಂ ಕಾಮಿಲ್ ಸಖಾಫಿ ಉಸ್ತಾದರ ನೇತೃತ್ವದಲ್ಲಿ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆಯ ನೂತನ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆಮಾಡಲಾಯಿತು.

ಅಧ್ಯಕ್ಷರಾಗಿ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿಯಾಗಿ ಹೈದರಾಲಿ ಕಾಟಿಪಳ್ಳ,ಕೋಶಾಧಿಕಾರಿಯಾಗಿ ಇಕ್ಬಾಲ್ ಮಧ್ಯನಡ್ಕ ಇವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಇಬ್ರಾಹಿಂ ಅಹ್ಸನಿ ಮಂಜನಾಡಿ, ನವಾಝ್ ಸಖಾಫಿ ಅಡ್ಯಾರ್ ಪದವು, ಕಾರ್ಯದರ್ಶಿಗಳಾಗಿ ಆರಿಫ್ ಝುಹ್ರಿ ಮುಕ್ಕ,ಆಬಿದ್ ನಈಮಿ ಕಟ್ಟತ್ತಿಲ, ಝುಹೈರ್ ಮಾಸ್ಟರ್ ಬಜ್ಪೆ, ಹಮೀದ್ ತಲಪಾಡಿ, ಸುಹೈಲ್ 10 th ಮೈಲ್, ಇರ್ಷಾದ್ ಹಾಜಿ ಗೂಡಿನಬಳಿ ಹಾಗೂ ಕಾರ್ಯಕಾರಿ ಸದಸ್ಯರಾಗಿ ಅಲ್ತಾಫ್ ಶಾಂತಿ ಭಾಗ್ ಜಾಫರ್ ಅಳೇಕಲ, ಫಾರೂಕ್ ಸಖಾಫಿ ಕಾಟಿಪಳ್ಳ, ರಫೀಖ್ ಮೂರನೇ ಬ್ಲಾಕ್, ಮನ್ಸೂರ್ ಹಿಮಮಿ, ನೌಫಾಲ್ ಫರೀಧ್ ನಗರ, ಮನ್ಸೂರ್ ಬಜಾಲ್, ನೌಸೀಫ್ ಪಂಜಿಮೊಗರು, ಸಿದ್ದೀಖ್ ಸ ಅದಿ ಬೊಳಂತೂರು,ಅಸ್ಲಂ ಸಂಪಿಲ, ಹಮೀದ್ ವರಕೋಡಿ, ಸಿದ್ದೀಕ್ ಬಜ್ಪೆ ಹಾಗೂ ಅನ್ಸಾರ್ T.H ಅವರನ್ನು ಆಯ್ಕೆ ಮಾಡಲಾಯಿತು.

error: Content is protected !! Not allowed copy content from janadhvani.com