janadhvani

Kannada Online News Paper

ಎಸೆಸ್ಸೆಫ್ ಹೂಹಾಕುವಕಲ್ಲು ಶಾಖೆಯ ನೂತನ ಸಾರಥಿಗಳು

ಮುಡಿಪು: ಎಸ್ಸೆಸ್ಸೆಫ್ ಹೂಹಾಕುವಕಲ್ಲು ಶಾಖೆ ಇದರ ವಾರ್ಷಿಕ ಮಹಾಸಭೆಯು ಉಸ್ಮಾನ್ ನಂದಾರ್ ರವರ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ಸುನ್ನೀ ಸೆಂಟರ್ ಹೂಹಾಕುವಕಲ್ಲುವಿನಲ್ಲಿ ನಡೆಯಿತು.ಮನಾಝಿರ್ ಮಾಸ್ಟರ್ ಸ್ವಾಗತಿಸಿದರು. ಎಸ್.ವೈ.ಎಸ್ ಹೂಹಾಕುವಕಲ್ಲು ಬ್ರಾಂಚ್ ಅಧ್ಯಕ್ಷ ಅಬೂಬಕ್ಕರ್ ನೂಜಿರವರು ಉದ್ಘಾಟಿಸಿದರು.

ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಸಂಘಟನಾ ತರಗತಿ ನಡೆಸಿದರು.ಸೆಕ್ಟರ್ ಚುನಾವಣಾ ವೀಕ್ಷಕರಾಗಿ ಝೈನುದ್ದೀನ್ ಇರಾಸೈಟ್, ರಫೀಕ್ ಸಿ.ಎಚ್ ಬಾಳೆಪುಣಿ, ರಫೀಕ್ ಬಿ.ಎನ್ ಬಾಳೆಪುಣಿ, ನೇತೃತ್ವದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಮನಾಝಿರ್ ಮಾಸ್ಟರ್ ರವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಜಲೀಲ್ ನಂದಾರ್, ಕೋಶಾಧಿಕಾರಿಯಾಗಿ ರಝಾಕ್ ಎಚ್, ಉಪಾಧ್ಯಕ್ಷರಾಗಿ ಇರ್ಷಾದ್ ಎಮ್.ಟಿ ಹಾಗೂ ಅಲೀ ತೋಟಾಲ್, ಜೊತೆ ಕಾರ್ಯದರ್ಶಿಗಳಾಗಿ ರಫೀಕ್ ಮುಸ್ಲಿಯಾರ್, ನವಾಝ್ ಎಚ್, ಝಲಿಕ್ ಎಚ್, ಫಾರೂಕ್ ಎಮ್.ಟಿ, ನಿಝಾಮ್ ಎನ್, ಇಮ್ರಾನ್ ಎಚ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೂರುದ್ದೀನ್ ನೂರ್, ನೌಶಾದ್ ಮದನಿ, ಮಜೀದ್ ನಂದಾರ್, ಸಿನಾನ್ ಎಚ್, ಸಹಲ್ ಟಿ, ಸೈಫುದ್ದೀನ್ ನವಗ್ರಾಮ ಸೈಟ್, ಸಮೀರ್ ಎಚ್, ರಾಝಿಕ್ ಎಚ್ ಆಯ್ಕೆಯಾದರು.

error: Content is protected !! Not allowed copy content from janadhvani.com