ಎಸ್ಸೆಸ್ಸೆಫ್ ಕಾಟಿಪಳ್ಳ ಸೆಕ್ಟರ್ ಇದರ ವಾರ್ಷಿಕ ಕೌನ್ಸಿಲ್, ( ಮಹಾಸಭೆ) ದಿನಾಂಕ 27/12/20 ರಂದು ರಾತ್ರಿ 8:30 ಘಂಟೆಗೆ ಸುನ್ನೀ ಸೆಂಟರ್ ಕಾಟಿಪಳ್ಳದಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷರಾದ ದಾವುದ್ ಹಕೀಂ ಸಖಾಫಿ ಕಾಟಿಪಳ್ಳ, ರವರು ದುವಾ ನಡೆಸಿದರು. ಕೆಸಿಎಫ್ ಫಾರೂಖ್ ಕಾಟಿಪಳ್ಳ ರವರು ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ನಝರುದ್ದೀನ್ 9ನೇ ಬ್ಲಾಕ್, ರವರು ಸ್ವಾಗತ ಹಾಗೂ ವಾರ್ಷಿಕ ವರದಿ ವಾಚಿಸಿದರು. ಸೆಕ್ಟರ್ ಕೋಶಾಧಿಕಾರಿ ಹನೀಫ್ ಕೋಟೆ ರವರ ಬದಲಿಗೆ ಖಲಂದರ್ ಸೂರಿಂಜೆ ರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. SSF ಕಾಟಿಪಳ್ಳ ಸೆಕ್ಟರ್ ಅಧ್ಯಕ್ಷರಾದ ದಾವುದ್ ಹಕೀಂ ಸಖಾಫಿ ಉಸ್ತಾದ್ ಅಧ್ಯಕ್ಷತೆ ವಹಿಸಿದ್ದರು.
SSF ಸುರತ್ಕಲ್ ಡಿವಿಷನ್ ನಿಂದ ಚುನಾವಣಾ ವೀಕ್ಷಕರಾಗಿ ಆಗಮಿಸಿದ ಸಿನಾನ್ ಸಖಾಫಿ 3ನೇ ಬ್ಲಾಕ್, ಹೈದರ್ 4ನೇ ಬ್ಲಾಕ್ ಹಾಗೂ ಸುರತ್ಕಲ್ ಡಿವಿಷನ್ ಉಪಾಧ್ಯಕ್ಷರು ಹನೀಫ್ ಅಹ್ಸನಿ, ರವರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. SSF ಸುರತ್ಕಲ್ ಡಿವಿಷನ್ ಅಧ್ಯಕ್ಷರಾದ ಉಮರುಲ್ ಫಾರೂಖ್ ಸಖಾಫಿ ಉಸ್ತಾದರು ಸಂಘಟನಾ ತರಗತಿ ನಡೆಸಿದರು.
ಬಳಿಕ ಹಳೆ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಅಧ್ಯಕ್ಷರು: ಅಫ್ಫಾನ್ ಸೂರಿಂಜೆ, ಪ್ರಧಾನ ಕಾರ್ಯದರ್ಶಿ: ಮುಹಮ್ಮದ್ ನಝರುದ್ದೀನ್ 9ನೇ ಬ್ಲಾಕ್, ಕೋಶಾಧಿಕಾರಿ: ನೌಫಲ್ 9ನೇ ಬ್ಲಾಕ್, ಉಪಾಧ್ಯಕ್ಷರು : ಹನೀಫ್ ಕೋಟೆ, ಕಾರ್ಯದರ್ಶಿಗಳು:ಇಕ್ಬಾಲ್ ಕಾಟಿಪಳ್ಳ, ಅಬ್ಝಲ್ ಸೂರಿಂಜೆ, ಖಲೀಲ್ 4ನೇ ಬ್ಲಾಕ್, ತ್ವಲ್ಹತ್ 4ನೇ ಬ್ಲಾಕ್, ಸವಾಝ್ ಕಾಟಿಪಳ್ಳ ಹಾಗೂ21 ಕಾರ್ಯಾಕಾರಿಣಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಯಿತು.
ಬಳಿಕ ನೂತನ ಸಮಿತಿಗೆ ಧ್ವಜ ಮತ್ತು ಕಡತಗಳನ್ನು ಹಸ್ತಾಂತರಿಸಲಾಯಿತು.ನೂತನ ಅಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಪ್ರಧಾನ ಕಾರ್ಯದರ್ಶಿಯವರು ಧನ್ಯವಾದಗಳನ್ನು ಅರ್ಪಿಸಿ, ಮೂರು ಸ್ವಲಾತಿನೊಂದಿಗೆ ಸಭೆ ಮುಕ್ತಾಯಗೊಳಿಸಲಾಯಿತು.
















ಇನ್ನಷ್ಟು ಸುದ್ದಿಗಳು
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ