✍ಇಕ್ಬಾಲ್ ಬಾಳಿಲ
(ಕಾರ್ಯದರ್ಶಿ ಎಸ್ಕೆಎಸ್ಸೆಸ್ಸೆಫ್ಫ್ ದ. ಕ ಜಿಲ್ಲೆ)
ಭಾರತದ ಲಾಕ್ ಡೌನ್ ನಿಯಮದಂತೆ ದೇಶದೆಲ್ಲೆಡೆ ಸಂಪೂರ್ಣ ಬಂದಾಗಿದೆ. ದೇಶದ ಹಲವು ಕಡೆಗಳಲ್ಲಿ ಅವಶ್ಯಕ ವಸ್ತುಗಳಿಗಾಗಿ ಎರಡು ದಿನಕ್ಕೊಮ್ಮೆ ಬೆಳಿಗ್ಗೆ 9ರ ತನಕ ನಿಯಮಾನುಸಾರವಾಗಿ
ತೆರೆದು ಕೊಳ್ಳುತ್ತವೆ. ಅದೇ ನಿಯಮ ನಮ್ಮ ದ.ಕ. ಜಿಲ್ಲೆಯಲ್ಲೂ ನಡೆಯಲಿ.
ಉಸ್ತುವಾರಿ ಸಚಿವರು, ನಾಲ್ಕು ದಿನ ಹೊರಬರದಂತೆ ಹೇಳಿ ನಂತರ ಇಂದು(ಮಾ.31) ಬೆಳಿಗ್ಗೆ 6ರಿಂದ ಸಂಜೆ ಮೂರು ಗಂಟೆಯವರೆಗೆ ಅವಕಾಶ ಕಲ್ಪಿಸಿರುವುದು ಸರಿಯಾದ ಕ್ರಮವಲ್ಲ.
ಒಂದು ದಿನಸಿ ಅಂಗಡಿಯ ಮುಂದೆ ನೂರಾರು ಮಂದಿ ಜಮಾಯಿಸುತ್ತಾರೆ ಒಟ್ಟಿಗೆ ಗುಂಪಾಗಿ ಅಂಗಡಿಗೆ ನೂಕು ನುಗ್ಗಲು ಆರಂಭಗೊಳ್ಳುತ್ತದೆ.
ಕೆಲವೊಂದು ಅಂಗಡಿಗಳಲ್ಲಿ ಸಾಲಾಗಿ ನಿಲ್ಲುವ ವೈವಸ್ಥೆ ಮಾಡಲಾಗಿತ್ತು.ಆದರೆ ಏನು ಪ್ರಯೋಜನ ಇಷ್ಟು ದಿನ ಮನೆಯಲ್ಲಿ ಜಾಗರೂಕತೆಯಿಂದ ಇದ್ದದ್ದನ್ನು ಒಂದೇ ದಿನದಲ್ಲಿ ಕಳೆದುಕೊಂಡರು.ಇನ್ನು ಒಂದು ತಿಂಗಳು ಏನು ಸಿಗಲ್ಲ ಅಂತ ಜನ ಭಾವಿಸಿದ್ದಾರೆ.ಅದ್ದರಿಂದಲೇ ವಸ್ತುಗಳಿಗಾಗಿ ಮುಗಿಬಿದ್ದಿದ್ದಾರೆ.
ದಯವಿಟ್ಟು ಅಧಿಕಾರಿಗಳು ಉಸ್ತುವಾರಿ ಸಚಿವರು, ಸಂಸದರು ಇದರ ಬಗ್ಗೆ ಗಮನ ಹರಿಸಿ ಜನರಿಗೆ ಮಾಹಿತಿ ನೀಡಿ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ.ಎರಡು ದಿನಕ್ಕೊಮ್ಮೆ ಬೆಳಿಗ್ಗೆ 9ರ ತನಕ ಅವಕಾಶ ಕಲ್ಪಿಸುವಂತೆ ವಿನಂತಿಸುತ್ತೇನೆ. ಇದರಿಂದ ಅಂತರವನ್ನು ಪಾಲಿಸಬಹುದು ರೋಗ ಹರಡುವಿಕೆಯನ್ನು ತಡೆಗಟ್ಟಬಹುದು.















ಇನ್ನಷ್ಟು ಸುದ್ದಿಗಳು
ಮುಸ್ಲಿಮ್ ಮತ ಸ್ಥಿತಿಗತಿ ಇಂದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಸುದೃಢಗೊಳಿಸಿದೆ,ರಾಜಣ್ಣ ಅರಿಯಲಿ: ಕೆ.ಅಶ್ರಫ್
ಮೊಂಟೆಪದವು ಗುಡ್ಡ ಕುಸಿತ: ಅವಶೇಷಗಳಡಿಯಲ್ಲಿ ಸಿಲುಕಿದ್ದ ಮಗು ಮೃತ್ಯು- ತಾಯಿಯ ರಕ್ಷಣೆ
ದೇರಳಕಟ್ಟೆ : ಮನೆಯ ತಡೆಗೋಡೆ ಕುಸಿದು 10 ವರ್ಷದ ಪುಟ್ಟ ಬಾಲಕಿ ಮೃತ್ಯು
ಭಾರೀ ಮಳೆ: ಮೊಂಟೆಪದವು ಮನೆ ಮೇಲೆ ಗುಡ್ಡ ಕುಸಿದು ಪುಟ್ಟ ಮಗು ಸಹಿತ ಇಬ್ಬರು ಮೃತ್ಯು
ಸದಾ ಸಮುದಾಯದ ಪರ ಧ್ವನಿಯೆತ್ತುವ ಅಲ್ಪಸಂಖ್ಯಾತ ಸಚಿವರು ಕರಾವಳಿಗೆ ಭೇಟಿ ನೀಡದಿರಲು ಕಾರಣವೇನು?
ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು
ದ.ಕ.ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ: ಜೆಡಿಎಸ್ ಬಂಟ್ವಾಳ ಮೈನಾರಿಟಿ ಅಧ್ಯಕ್ಷ ಮುಹಮ್ಮದ್ ಶಫೀಕ್ ಆಲಡ್ಕ
ಮುಸ್ಲಿಮ್ ಬಸ್ ಪ್ರಯಾಣಿಕನ ಮೇಲೆ ಹಲ್ಲೆ: ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು- ಕೆ.ಅಶ್ರಫ್
ಸರಕಾರದ ಆದೇಶ, ತುಳುನಾಡಿನ ಜನತೆಯ ಒಗ್ಗಟ್ಟಿನ ಹೋರಾಟದ ಫಲ- ಮುನೀರ್ ಕಾಟಿಪಳ್ಳ
ಮುಸ್ಲಿಮ್ ವರ್ತಕರ ಮೇಲೆ ಹಲ್ಲೆ: ಮುಸ್ಲಿಮ್ ಮುಖಂಡರ ಭೇಟಿ, ಗಂಭೀರ ಪರಿಗಣನೆ- ಕೆ.ಅಶ್ರಫ್