janadhvani

Kannada Online News Paper

ಉಲಮಾ ಒಕ್ಕೂಟದ ವಖ್ಫ್ ಪ್ರತಿಭಟನೆ : ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ ಸಂಘಟಕರು

ಮಂಗಳೂರು: ಏಪ್ರಿಲ್ 18 ರಂದು, ಮಂಗಳೂರಿನಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯ ಅಭೂತಪೂರ್ವ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ನಾಯಕರು ವಿಶೇಷ ಕೃತಜ್ಞತೆ ಸಲ್ಲಿಸಿದರು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಡಿಸಿಪಿ ಕ್ರೈಮ್ ಮತ್ತು ಟ್ರಾಫಿಕ್ ಕೆ.ರವಿಶಂಕರ್, ಸಂಚಾರಿ ಎಸಿಪಿ ನಜ್ಮಾ ಫಾರೂಖಿ, ನಾಗೂರಿ ಇನ್ಸ್ ಪೆಕ್ಟರ್ ನಾಗರಾಜ್ ಅವರಿಗೆ ಹೂಗುಚ್ಛ ನೀಡಿ ಅಭಿನಂಧಿಸಲಾಯಿತು.

ಪ್ರತಿಭಟನೆ ದಿವಸ ಕೆಲವು ಯುವಕರ ಮೇಲೆ ದಾಖಲಾದ ಕೇಸ್ ಗಳ ಕುರಿತು ಚರ್ಚಿಸಲಾಯಿತು.

ನಿಯೋಗದಲ್ಲಿ ಉಲಮಾ ಒಕ್ಕೂಟದ ಕಾರ್ಯದರ್ಶಿಗಳಾದ ಡಾ ಎಮ್ಮೆಸ್ಸೆಂ.ಝೈನೀ ಕಾಮಿಲ್, ಅಬ್ದುಲ್ ಅಝೀಝ್ ದಾರಿಮಿ, ಜಿಲ್ಲಾ ವಖ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಉಪಾಧ್ಯಕ್ಷ ಅಶ್ರಫ್ ಕಿನಾರ ಮಂಗಳೂರು, ಸುಹೈಲ್ ಕಂದಕ್, ಸೈದುದ್ದೀನ್ ಬೈಕಂಪಾಡಿ ಬಶೀರ್ ಕಣ್ಣೂರ್ ಮುಂತಾದವರು ಭಾಗಿಯಾಗಲಿದ್ದರು.