ಉಳ್ಳಾಲ: ಅಲ್ ಮಸ್ಜಿದುಲ್ ಜಾಮಿಉಲ್ ಅಮೀನ್ (401) ಅಳೇಕಲ ಉಳ್ಳಾಲ ಇದರ ದ್ವಿ ವಾರ್ಶಿಕ ಮಹಾಸಬೆಯು ಆಗಸ್ಟ್ 04 ಬಾನುವಾರ ನಜಾತುಸ್ಸಿಬಿಯಾನ್ ಮದ್ರಸ ಹಾಲ್ ನಲ್ಲಿ ಯು.ಎಸ್ ಹಂಝ ಹಾಜಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮಸೀದಿಯ ಖತೀಬರಾದ ಅಲ್ ಹಾಜ್ ಅಬೂ ಝಿಯಾದ್ ಮದನಿ ಪಟ್ಟಾಂಬಿ ಉಸ್ತಾದರು ದುಆ ನಡೆಸಿ ಆಶೀರ್ವಚನ ನೀಡಿದರು.ಹಾಲಿ ಸಮಿತಿ ಸದಸ್ಯರನ್ನು ಬರ್ಕಾಸ್ತುಗೊಳಿಸಿ 2019-21 ನೇ ಸಾಲಿಗೆ ನೂತನ ಸಮಿತಿ ಸದಸ್ಯ ರನ್ನು ನೇಮಕ ಮಾಡಲಾಯಿತು.
ಹಂಗಾಮಿ ಅಧ್ಯಕ್ಷರಾಗಿ ಹಾಜಿ ಯು ಎಸ್ ಹಂಝ ರವರನ್ನು ಆಯ್ಕೆಮಾಡಲಾಯಿತು.
ನಂತರ ಆಗಸ್ಟ್ 18 ರಂದು ಹಂಗಾಮಿ ಅಧ್ಯಕ್ಷರಾದ ಯು ಎಸ್ ಹಂಝ ಹಾಜಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷರಾಗಿ ಪಿ.ಎಸ್ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಯವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.
ಉಪಾದ್ಯಕ್ಷರಾಗಿ ಅಶ್ರಫ್ ಯು.ಡಿ, ಪ್ರ ಕಾರ್ಯದರ್ಶಿಯಾಗಿ ಯು ಫಾರೂಕ್, ಕಾರ್ಯದರ್ಶಿಯಾಗಿ ಶರೀಫ್ ಕಕ್ಕೆತೋಟ, ಜಾಫರ್ ಯು ಎಸ್, ಕೋಶಾಧಿಕಾರಿ ಯಾಗಿ ಯು.ಸಿ ಇಬ್ರಾಹಿಂ ಮಸೀದಿ ಸಂಚಾಲಕರಾಗಿ ನಝೀರ್, ಮದ್ರಸ ಸಂಚಾಲಕರಾಗಿ ರಿಯಾಝ್ ರವರನ್ನು ಪದಾಧಿಕಾರಿಗಳಾಗಿ ಆರಿಸಲಾಯಿತು.
ಸಮಿತಿ ಸದಸ್ಯರಾಗಿ ಹಾಜಿ ಯು ಎಸ್ ಹಂಝ, ರವೂಫ್ ಹಾಜಿ, ಪುತ್ತುಬಾವ ಹಾಜಿ, ಅಬ್ದುಲ್ ಖಾದರ್, ಜಲಾಲ್ ತಂಙಳ್, ಅನ್ಸಾರ್ ಮಾಲಿಕ್, ಅಶ್ರಫ್ ಸುಳ್ಯ, ಬಶೀರ್ , ಅಬ್ಬಾಸ್ ಪಾಂಡೆಲ್, ರಶೀದ್ ಪಾಂಡೆಲ್, ಸಮದ್, ರಫೀಕ್ ಯು ಎಸ್, ನವಾಝ್, ಉಮರಬ್ಬ ಕಕ್ಕೆತೋಟ, ರಹ್ಮತ್, ಯಾಕೂಬ್ ಪಾಂಡೆಲ್, ಲತೀಫ್ ರವರನ್ನು ಆರಿಸಲಾಯಿತು.