ಮದೀನಾ: ಅಲ್ ಮದೀನಾ ಮಂಜನಾಡಿ ಇದರ ಮದೀನಾ ಮುನವ್ವರ ಘಟಕ ಸಮಿತಿ ಮತ್ತು ಕೆಸಿಎಫ್ ಮದೀನಾ ಸೆಕ್ಟರ್ ವತಿಯಿಂದ ಮದೀನಾ ಮುನವ್ವರದ KCF ಭವನದಲ್ಲಿ ಶುಕ್ರವಾರ ಜುಮಾ ನಮಾಜಿನ ಬಳಿಕ ಸಯ್ಯಿದ್ ಶಹೀರ್ ಅಲ್ ಬುಖಾರಿ ತಂಙಳ್ ಪೊಸೋಟ್ ಅವರ ನೇತೃತ್ವದಲ್ಲಿ ಅನುಸ್ಮರಣೆ ಹಾಗೂ ತಹ್ಲೀಲ್ ಸಮರ್ಪಣೆ ನಡೆಯಿತು.
ಇತ್ತೀಚೆಗೆ ನಮ್ಮನ್ನಗಲಿದ “ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ” ಇದರ ಸಾರಥಿ ಶರಫುಲ್ ಉಲಮಾ ಶೈಖುನಾ ಅಬ್ಬಾಸ್ ಉಸ್ತಾದರ ಅನುಸ್ಮರಣೆ ಹಾಗೂ KCF ಸೌದಿ ರಾಷ್ಟ್ರೀಯ ನೇತಾರ ಹಬೀಬ್ ಅಡ್ಡೂರು ರವರ ತಂದೆ ಅಡ್ಡೂರು ಯೂಸುಫ್ ಹಾಜಿ ಉಸ್ತಾದ್ ರವರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಡಾ| ಫಾರೂಖ್ ನಈಮಿ ಕೊಲ್ಲಂ ಹಾಗೂ ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ಅನುಸ್ಮರಣೆ ಭಾಷಣ ನಡೆಸಿದರು. ಹಲವಾರು ಸಂಘಟನಾ ಕಾರ್ಯಕರ್ತರು ಪಾಲ್ಗೊಂಡಿದ್ದರು.