ಉಪ್ಪಿನಂಗಡಿ: ಮುಹ್ಯುದ್ದೀನ್ ಜುಮಾ ಮಸೀದಿ ಮಾಚಾರ್ ಹಾಗೂ ಮುಹಮ್ಮದ್ ವಲಿಯುಲ್ಲಾಹಿ ದರ್ಗಾ ಶರೀಫ್ ನಲ್ಲಿ ಸಂಭ್ರಮ ಸಡಗರದಿಂದ ಈದುಲ್ ಫಿತ್ರ್ ಆಚರಿಸಿದರು.
ಪವಿತ್ರ ರಂಝಾನ್ ನಲ್ಲಿ ಒಂದು ತಿಂಗಳು ವ್ರತಾನುಷ್ಠಾನ ನಡೆಸಿ,ಕೆಡುಕಿನಿಂದ ಸರಿದು ನಿಂತಂತೆ ಜೀವನದುದ್ದಕ್ಕೂ ಅಳವಡಿಸಿಕೊಂಡು ಅಲ್ಲಾಹನ ಸಂಪ್ರೀತಿಗಳಿಸುವಂತಾಗಬೇಕು ಎಂದು ಖತೀಬ್ ಅಬ್ದುರಹ್ಮಾನ್ ಸಖಾಫಿ ಖುತ್ಬಾ, ನಮಾಝ್ ಗೆ ನೇತೃತ್ವ ನೀಡಿ ಕರೆ ನೀಡಿದರು.
ಈ ಜಮಾಅತ್ತಿನಲ್ಲಿ ನಿರಂತರ 10 ವರ್ಷ ಸೇವೆಗೈದ ಖತೀಬ್ ಅಬ್ದರಹ್ಮಾನ್ ಸಖಾಫಿ, ಹಾಗೂ 6 ವರ್ಷ ಸೇವೆಗೈದ ಮುಅಲ್ಲಿಂ ಆದಂ ಮುಸ್ಲಿಯಾರ್ ಅವರನ್ನು ಮಸೀದಿ ವತಿಯಿಂದ ಅಧ್ಯಕ್ಷರಾದ ಬಿ.ಎಮ್. ಇಲ್ಯಾಸ್ ನೇತೃತ್ವದಲ್ಲಿ ಸ್ಮರಣಿಕೆ ಹಾಗೂ ಶಾಲು ಹೊದಿಸಿ ಮತ್ತು SSF ಶಾಖೆ ವತಿಯಿಂದ ನಗದು ನೀಡಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಗೌರವ ಅಧ್ಯಕ್ಷ ಹಂಝ ಬಿ ಎ ,ಕೋಶಾಧಿಕಾರಿ ಅಬ್ದುಲ್ ರಝಾಕ್ ಚೆಕ್ಕೆಡಡಿ, ಪ್ರ.ಕಾರ್ಯದರ್ಶಿ ಇಕ್ಬಾಲ್ ಮಾಚಾರ್, ಉಪಾಧ್ಯಕ್ಷ ಸಲೀಂ ಅಂಗಡಿ, ಕಾರ್ಯದರ್ಶಿ ಶರೀಫ್ ಬೆದ್ರಳಿಕೆ, SSF ಅಧ್ಯಕ್ಷ ಅಬ್ದುಲ್ ಸಲಾಂ ಅಂಗಡಿ ಉಪಾಧ್ಯಕ್ಷ ಅನ್ಸಾರ್ ಕಿಲೊ ಬಝಾರ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ SSF ಕಾರ್ಯಕರ್ತರು, ಜಮಾಅತರು ಉಪಸ್ಥಿತರಿದ್ದರು. ತೀರ್ಥಹಳ್ಳಿ ಸರಕಾರಿ ಕಾಲೆಜು ಮನಶಾಸ್ತ್ರ ಉಪನ್ಯಾಸಕ ಮಹಮ್ಮದ್ ಇಕ್ಬಾಲ್ ಮಾಸ್ಟರ್ ಬದ್ರಿಯಾ ಕಾರ್ಯಕ್ರಮ ನಿರೂಪಿಸಿದರು.
ವರದಿ: ಎಂ.ಎಂ.ಉಜಿರೆ















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್