ಬೆಂಗಳೂರು: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನದಂತೆ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಸಮಿತಿ ವತಿಯಿಂದ ಖುರ್’ಆನ್ ತರ್ತೀಲ್ ನ್ಪರ್ದೆಯು ಎಸ್ಸೆಸ್ಸೆಫ್ ಜಿಲ್ಲಾ ಅಧ್ಯಕ್ಷರಾದ ಹಬೕಿಬ್ ನೂರಾನಿ ಉಸ್ತಾದರ ಅಧ್ಯಕ್ಷತೆಯಲ್ಲಿ ಹಝ್ರತ್ ತವಕ್ಕಲ್ ಮಸ್ತಾನ್ ದರ್ಗಾ ಮಸೀದಿಯಲ್ಲಿ ಭಾನುವಾರ ನಡೆಯಿತು.
ಎಸ್ ವೈ ಎಸ್ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಮುಜೀಬ್ ಸಖಾಫಿ ಬೆಂಗಳೂರು. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖುರ್’ಆನ್ ಪಾರಾಯಣ. ಹಿಪ್ಳ್. ಕ್ವಿಝ್. ಮುಂತಾದ ಸ್ಪರ್ಧೆಯನ್ನೊಲಗೊಂಡ.ಖುರ್’ಆನ್ ತರ್ತೀಲ್ ಸ್ಪರ್ಧೆಯಲ್ಲಿ. ಜೂನಿಯರ್. ಸೀನಿಯರ್. ಹಾಗೂ ಜನರಲ್. ಕ್ಯಾಂಪಸ್ ದಅವಾಃ. ಎಂಬ ವಿಭಾಗದಲ್ಲಿ ನೂರಕ್ಕಿಂತಲೂ ಮಿಕ್ಕ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ಹಾಗೂ ಬಹುಮಾನ ವಿತರಣೆಯನ್ನು ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಶರೀಫ್ ಬೆಂಗಳೂರು ನಿರ್ವಹಿಸಿದರು. ಸತ್ತಾರ್ ಮೌಲವಿ. ನವಾಝ್ ಭಟ್ಕಲ್. ಹಾಗೂ ಅನ್ವರ್ ಮುಸ್ಲಿಯಾರ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹರೇಕಳ ಶಿಹಾಬ್ ಮಡಿವಾಳ ಸ್ವಾಗತಿಸಿ, ಕಾರ್ಯಕ್ರಮ ಶಬೀಬ್ ಬೆಂಗಳೂರು ನಿರೂಪಿಸಿದರು.
ರಾಜ್ಯಮಟ್ಟದ ಕುರ್”ಅನ್ ತರ್ತೀಲ್ ಸ್ಪರ್ಧೆಯು ಜೂನ್ 2ರಂದು ಮಂಗಳವಾರ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ನಡೆಯಲಿದೆ.
ವರದಿ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ