janadhvani

Kannada Online News Paper

ಎಸ್ಸೆಸ್ಸೆಫ್ ಕ್ಯಾಂಪಸ್ ವಿಟ್ಲ ಡಿವಿಷನ್ ವತಿಯಿಂದ ಇಫ್ತಾರ್ ಸಂಗಮ

ವಿಟ್ಲ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ಕ್ಯಾಂಪಸ್ ವಿಟ್ಲ ಡಿವಿಷನ್ ಸಮಿತಿಯ ವತಿಯಿಂದ
ರವಿವಾರ ಉಕ್ಕುಡ ತಾಜುಲ್ ಉಲಮಾ ಮಹಿಳಾ ಶರೀಅತ್ ಕಾಲೇಜಿನಲ್ಲಿ ಕ್ಯಾಂಪಸ್ ಇಫ್ತಾರ್ ಸಂಗಮ ನಡೆಯಿತು.

ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಅದ್ಯಕ್ಷರಾದ ಅಬ್ದುಲ್ ರಹ್ಮಾನ್ ಶರಫಿ ಮೂಡಂಬೈಲು ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ವಿಟ್ಲ ಡಿವಿಷನ್ ನಾಯಕರಾದ ರಹೀಂ ಸಖಾಫಿ ಮೇಗಿನಪೇಟೆ ಉದ್ಘಾಟಿಸಿ ಮಾತನಾಡಿದರು.
ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರಾದ ಸಲೀಂ ಹಾಜಿ ಬೈರಿಕಟ್ಟೆ ರವರು ತರಗತಿ ನಡೆಸಿದರು.

ಕಾರ್ಯಕ್ರಮದಲ್ಲಿ ಡಿವಿಷನ್ ಉಪಾಧ್ಯಕ್ಷರಾದ ರಝ್ಝಾಕ್ ಪೆಲ್ತಡ್ಕ, ಕಾರ್ಯದರ್ಶಿ ಅಶ್ಫಾಕ್ ಟಿಪ್ಪುನಗರ, ಡಿವಿಷನ್ ನಾಯಕರಾದ ಕೆ.ಎಂ. ಅಶ್ರಫ್ ಸಖಾಫಿ ಕನ್ಯಾನ, ರಝಾಕ್ ಬೈರಿಕಟ್ಟೆ ಸೇರಿದಂತೆ, ಕ್ಯಾಂಪಸ್ ಸಮಿತಿಯ ನಾಯಕರಾದ ಸೈಫುದ್ದೀನ್ ಅಳಕೆಮಜಲು, ಶರೀಫ್ ಅಳಿಕೆ, ಅಶ್ರಫ್ ಗೋಳಿಕಟ್ಟೆ, ಉನೈಸ್ ಅಳಕೆಮಜಲು, ಮೊದಲಾದವರು ಉಪಸ್ಥಿತರಿದ್ದರು. ಕ್ಯಾಂಪಸ್ ಕಾರ್ಯದರ್ಶಿ ಶಾಹಿರ್ ಕೊಳಂಬೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

ವರದಿ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !! Not allowed copy content from janadhvani.com