ಬ್ರಹ್ಮಾವರ; ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಇದರ ವತಿಯಿಂದ ಡಿವಿಷನ್ ಮಟ್ಟದ ” ಲೀಡರ್ಸ್ ಮೋಟಿವೇಶನಲ್ ಕಾರ್ಯಾಗಾರ ಇತ್ತೀಚೆಗೆ ರಂಗನಕೆರೆ ಮದ್ರಸ ಸಬಾಂಗಣದಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಅಧ್ಯಕ್ಷರಾದ ಸೈಯದ್ ಯೂಸುಫ್ ತಂಙಳ್ ಅಧ್ಯಕ್ಷತೆಯಲ್ಲಿ, ಎಸ್.ವೈ.ಎಸ್ ಜಿಲ್ಲಾ ಅಧ್ಯಕ್ಷರಾದ ಸೈಯದ್ ಕೋಟೇಶ್ವರ ತಂಙಳ್ ದುವಾ ಮಾಡಿದರು. ಜಿಲ್ಲಾ ಎಸ್.ವೈ.ಎಸ್ ಉಪಾಧ್ಯಕ್ಷ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಉದ್ಘಾಟಿಸಿದರು. ರಾಜ್ಯ ಎಸ್ಸೆಸ್ಸೆಫ್ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಹಾಗು ರಾಜ್ಯ ಕೋಶಾಧಿಕಾರಿ ರವೂಪ್ ಖಾನ್ ಕುಂದಾಪುರ ವಿಷಯ ಮಂಡಿಸಿದರು.
ಕಾರ್ಯಾಗಾರದಲ್ಲಿ ರಂಗನಕೆರೆ ಮಸೀದಿ ಅಧ್ಯಕ್ಷರಾದ ಫಾರೂಕ್, ಕಾರ್ಯದರ್ಶಿ ರಪೀಕ್ ರಂಗನಕೆರೆ, ಉಡುಪಿ ಜಿಲ್ಲಾ ಕೋಶಾಧಿಕಾರಿ ಕೆ.ಎಸ್.ಎಮ್ ಮನ್ಸೂರ್, ಶಿಬಿರದ ಚೇರ್ಮನ್ ಇಬ್ರಾಹಿಂ ಆರ್.ಕೆ, ಡಿವಿಷನ್ ಗೌರವ ಸಲಹೆಗಾರರಾದ ರಝಾಕ್ ಉಸ್ತಾದ್, ರಶೀದ್ ಉಸ್ತಾದ್, ಸುಬುಹಾನ್ ಹೊನ್ನಾಳ, ಸಮದ್ ಮದನಿ ಸಾಸ್ತಾನ, ಕಟಪಾಡಿ ಸೆಕ್ಟರ್ ಅಧ್ಯಕ್ಷ ಆಸೀಪ್ ಸರಕಾರಿಗುಡ್ಡೆ, ಮಣಿಪಾಲ ಸೆಕ್ಟರ್ ಅಧ್ಯಕ್ಷ ಶಾಹುಲ್ ದೊಡ್ಡಣಗುಡ್ಡೆ, ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಶಂಶುದ್ದಿನ್ ರಂಗನಕೆರೆ, ಡಿವಿಷನ್ ಉಪಾಧ್ಯಕ್ಷ ಮಜೀದ್ ಕಟಪಾಡಿ, ಕೋಶಾಧಿಕಾರಿ ನಝೀರ್ ಸಾಸ್ತಾನ, ರಂಗನಕೆರೆ ಖತೀಬರಾದ ಶರ್ವಾನಿ ರಝ್ವಿ ಹಾಗು ಇತರೆ ನಾಯಕರು ಉಪಸ್ಥಿತಿ ಇದ್ದರು.
ಕಾರ್ಯಾಗಾರವನ್ನು ಉಡುಪಿ ಜಿಲ್ಲಾ ಜೊತೆ ಕಾರ್ಯದರ್ಶಿ ನಾಸೀರ್ ಭದ್ರಗಿರಿ ಸ್ವಾಗತಿಸಿದರು. ಡಿವಿಷನ್ ಪ್ರ. ಕಾರ್ಯದರ್ಶಿ ಸಿದ್ದೀಕ್ ಸಂತೋಷ್ ನಗರ ವಂದಿಸಿದರು.