ಕಾಞಂಗಾಡ್: ಖ್ಯಾತ ಸೂಫಿವರ್ಯರೂ, ಆಧ್ಯಾತ್ಮ ನಾಯಕರೂ ಮಂಜನಾಡಿ ಉಸ್ತಾದ್ ಎಂದೇ ಖ್ಯಾತರಾದ ಮರ್ಹೂಮ್ ಶೈಖುನಾ ಸಿ.ಪಿ. ಮಹಮ್ಮದ್ ಕುಂಞಿ ಮುಸ್ಲಿಯಾರ್ ರವರು ಪ್ರತ್ಯೇಕ ಇಜಾಝತ್ (ಅನುಮತಿ) ಪ್ರಕಾರ ತಮ್ಮ ಕಾಞಂಗಾಡ್ , ಹಳೆ ಕಡಪುರದ ‘ಗೌಸಿಯಾ ಮಂಝಿಲ್’ ನಲ್ಲಿ ವರ್ಷಂಪ್ರತಿ ರಬೀಉಲ್ ಆಖಿರ್ ತಿಂಗಳಲ್ಲಿ ನಡೆಸಿಕೊಂಡು ಬರುತ್ತಿದ್ದ, ಬೃಹತ್ ಆಧ್ಯಾತ್ಮಿಕ ಮಜ್ಲಿಸ್ ಆಗಿದೆ “ರಾತೀಬುಲ್ ಗೌಸಿಯತುಲ್ ಖಾದಿರಿಯ-ಜಲಾಲಿಯ ದಿಕ್ರ್ ಹಲ್ಕ”. ಶೈಖುನಾ ತಾಜುಲ್ ಉಲಾಮಾ ಸಹಿತ ಅನೇಕ ವಿದ್ವತ್ ಪುರುಷರು, ಸಾದಾತುಗಳು ನಿರಂತರ ಭಾಗವಹಿಸುತ್ತಿದ್ದ ; ಆಧ್ಯಾತ್ಮಿಕ ಮಹತ್ವವುಳ್ಳ, ಪ್ರಾರ್ಥನೆಗೆ ಉತ್ತರ ಲಭ್ಯವಿರುವ, ಉದ್ದೇಶ ಸಾಫಲ್ಯದ ಅನೇಕ ನಿದರ್ಶನಗಳಿರುವ ವಿಶೇಷ ಮಜ್ಲಿಸಿದು. ಉಸ್ತಾದರ ವಫಾತ್ ಬಳಿಕವೂ ಮಶಾಯಿಕ್ ಗಳ ಪರಂಪರಾಗತ ರೂಢಿಯಂತೆ ಇಂದಿಗೂ ಈ ಮಜ್ಲಿಸನ್ನು ಉಸ್ತಾದರ ಮಕ್ಕಳು ಹಾಗೂ ಕುಟುಂಬಸ್ಥರು ಮುನ್ನಡೆಸಿಕೊಂಡು ಬರುತ್ತಿದ್ದಾರೆ.
ಈ ವರ್ಷ 60ನೇ ವರ್ಷದ ಮಜ್ಲಿಸ್ ಆಗಿದ್ದು: ಇದೇ ಅಕ್ಟೋಬರ್ 18 ಮತ್ತು 19 ನೇ ದಿನಾಂಕಗಳಲ್ಲಿ ಆಯೋಜಿಸಲಾಗಿದೆ. ಅ. 18 ರಂದು ಮಗ್ರಿಬ್ ನಮಾಜಿನ ನಂತರ; ಖ್ಯಾತ ಬುರ್ದಾ ಪ್ರಕೀರ್ತಕರಾದ ಹಾಫಿಲ್ ಝೈನುಲ್ ಆಬಿದ್ ಸಖಾಫಿ ಮಂಬುರಂ ಇವರ ತಂಡದ ನೇತೃತದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ. ಅ.19 ರಂದು ಮಗ್ರಿಬ್ ಬಳಿಕ ನಡೆಯುವ ‘ರಾತೀಬುಲ್ ಗೌಸಿಯತುಲ್ ಖಾದಿರಿಯ್ಯ ಜಲಾಲಿಯ ದಿಕ್ರ್ ಹಲ್ಕ’ ದ ನೇತೃತ್ವವನ್ನು ರೂಹುಸ್ಸಾದಾತ್ ಅಸ್ಸಯ್ಯಿದ್ ಅಬ್ದುಲ್ ಖಾದಿರ್ ಹೈದ್ರೋಸಿ ಮುತ್ತು ಕೋಯ (ಎಲಂಗೂರು ತಂಗಳ್) ವಹಿಸಲಿದ್ದಾರೆ.
ಉಸ್ತಾದರ ಶಿಷ್ಯಂದಿರು, ಅಭಿಮಾನಿಗಳು, ದೀನೀ ಪ್ರೇಮಿಗಳನ್ನು ಈ ಅಧ್ಯಾತ್ಮ ಕಾರ್ಯಕ್ರಮಕ್ಕೆ ಸ್ವಾಗತ ಸಮಿತಿ ಆಹ್ವಾನಿಸಿದ್ದು, ಸ್ತ್ರೀಯರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಏರ್ಪಡಿಸಿದೆ.
















ಇನ್ನಷ್ಟು ಸುದ್ದಿಗಳು
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ
ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ