janadhvani

Kannada Online News Paper

ಪಟ್ಟೆ ಬುಸ್ತಾನುಲ್ ಉಲೂಂ ಮದ್ರಸದಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ

ನೆಲ್ಯಾಡಿ: ಪಟ್ಟೆ ಬುಸ್ತಾನುಲ್ ಉಲೂಂ ಮದ್ರಸ ದಲ್ಲಿ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ನಡೆಯಿತು .ಮದರಸ ಅಧ್ಯಕ್ಷರಾದ ಮುಸ್ತಫ ಪಟ್ಟೆಯವರು ಧ್ವಜಾರೋಹಣ ಮಾಡಿದರು.

ಮದರಸ ಸದರ್ ಉಸ್ತಾದರಾದ ಝುಬೈರ್ ಸಖಾಫಿ ಯವರು ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು.

ಸಮಾರಂಭದಲ್ಲಿ ಆದಮಾಕ ಪಟ್ಟೆ,ಯುಸುಫ್ ಹಾಜಿ, ಕುಞ್ಞಿಮೋನಾಕ, ಇಬ್ರಾಹಿಂ ಸುಳ್ಯ, ಆದಂ ಮನ್ನಗುಂಡಿ, ಸುಲೈಮಾನ್, ಅಬ್ದುಲ್ ರಹಿಮಾನ್ FF, ಮದ್ರಸ ಕಾರ್ಯದರ್ಶಿ ಅಬ್ದುಲ್ ರಹಿಮಾನ್. ಪಟ್ಟೆ, ಅಶ್ರಫ್, ರಫೀಕ್, ರಫೀಕ್ BM,ಸಿರಾಜ್ ಮದನಿ, ಅಬ್ಬಾಸ್, ಸಿದ್ದೀಕ್, ಉಮ್ಮರ್ D,ಉಮ್ಮರ್ MG, MR ಪಟ್ಟೆ,ಸಲೀಂ ಪಟ್ಟೆ ಉಪಸ್ಥಿತರಿದ್ದರು.

SBS ಅಧ್ಯಕ್ಷ ಮುರ್ಶಿದ್ ಸ್ವಾಗತಿಸಿ SBS ಕಾರ್ಯದರ್ಶಿ ಶಾರಿಝ್ ಧನ್ಯವಾದ ಹೇಳಿದರು.