ಮಕ್ಕತುಲ್ ಮುಕರ್ರಮದ ಶರಯಾದಲ್ಲಿ ಕಳೆದ 25 ವರ್ಷಗಳಿಂದ ಟೈಲರ್ ಆಗಿ ದುಡಿಯುತ್ತಿದ್ದ ಅಬ್ಬಾಸ್ ಹಾಜಿ ಸಾಲ್ಮರ ಹೃದಯಾಘಾತದಿಂದ ಮಕ್ಕಾದ ಸೀಸಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಕಾರ್ಯಕಾರಿ ಸದಸ್ಯರು, ಜಬಲನ್ನೂರು ಯೂನಿಟ್ ಅಧ್ಯಕ್ಷರು, ಹಾಗೂ ಮಕ್ಕಾದಲ್ಲಿರುವ ಸುನ್ನೀ ಸಂಘ ಕುಟುಂಬಗಳ ಸಂಸ್ಥೆಗಳಾದ ಮಾಣಿ ದಾರುಲ್ ಇರ್ಷಾದ್, ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್, ಮುಹಿಮ್ಮಾತ್, ಸಅದಿಯ್ಯ, ಕಾವಲ್ಕಟ್ಟೆ ಅಲ್ ಖಾದಿಸ, ಉಜಿರೆ ಮಲ್ಜಹ್, ಸುರಿಬೈಲ್ ದಾರುಲ್ ಅಶ್ಅರಿಯ್ಯ, ತಾಜುಲ್ ಉಲಮಾ ಇಸ್ಲಾಮಿಕ್ ಕಾಂಪ್ಲೆಕ್ಸ್ ತಲಕ್ಕಿ, ಸಅದಿಯ್ಯ ಪೌಂಡೇಶನ್ ಬೆಂಗಳೂರು, ಮಂಜನಾಡಿ ಅಲ್ ಮದೀನಾ, ಜಿಸಿಸಿ ಬನ್ನೂರು ಸುನ್ನೀ ಸೆಂಟರ್ ಹೀಗೆ ಹಲವಾರು ಸುನ್ನೀ ಸಂಘ ಸಂಸ್ಥೆಯಲ್ಲಿ ನೇತೃತ್ವ ನೀಡಿ ಸಹಾಯ ಸಹಕಾರ ಮಾಡುತಿದ್ದ ಸೌಮ್ಯ ಸ್ವಭಾವದ ಒರ್ವ ಕೊಡುಗೈ ದಾನಿಯಾಗಿದ್ದರು ಅಬ್ಬಾಸ್ ಹಾಜಿ. ದಮ್ಮಾಂ ಹಾಗೂ ಮಕ್ಕಾದಲ್ಲಿ ಅನಿವಾಸಿಯಾಗಿ 35 ವರ್ಷಗಳ ಕಾಲ ನೆಲೆಸಿ ಕೊನೆಗೆ ಫೈನಲ್ ಎಕ್ಸಿಟ್ ಮಾಡಿ ಊರಿಗೆ ಹೋಗಲು ಎಂಬಸ್ಸಿ ಹಾಗೂ ಕೆಸಿಎಫ್ ಸೌದಿ ಅರೇಬಿಯಾ ಆಯೋಜಿಸುತ್ತಿರುವ ಚಾರ್ಟೆಡ್ ವಿಮಾನದಲ್ಲಿ ಹೆಸರು ಕೂಡಾ ನೋಂದಾವಣೆ ಮಾಡಿದ್ದರು. ಆದರೆ.., ಅಲ್ಲಾಹುವಿನ ವಿಧಿಯೇ ಬೇರೆಯಾಗಿತ್ತು, ಅಲ್ಲಾಹುವಿನ ವಿಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಸಾಂತ್ವನ ಇಲಾಖೆಯ ಸಹಕಾರದಿಂದ ಊರಿನಿಂದ ದಾಖಲೆ ಪತ್ರಗಳನ್ನು ಸಂಗ್ರಹಿಸಿ ಜೂನ್.14 ರಂದು ಮಕ್ಕಾ ಶರಯಾದಲ್ಲಿ ದಫನ್ ಪ್ರಕ್ರಿಯೆ ನಡಸಲಾಯಿತು. ದಫನ್ ವಿಧಿ ವಿಧಾನಗಳ ಸಂದರ್ಭದಲ್ಲಿ ಮಕ್ಕಾದ ಎಲ್ಲಾ ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಅವರು ಸ್ನೇಹಿತರು ಪಾಲ್ಗೊಂಡಿದ್ದರು.
ಮೃತರಿಗೆ ಪತ್ನಿ, ಮೂರು ಗಂಡು ಮಕ್ಕಳು, ಒಬ್ಬ ಮಗ ಕೆಲವು ವರ್ಷಗಳ ಹಿಂದೆ ಅಪಘಾತೊಂದರಲ್ಲಿ ಮರಣ ಹೊಂದಿದ್ದರು. ಮೃತರ ಹೆಸರಿನಲ್ಲಿ ಮಯ್ಯಿತ್ ನಮಾಝ್, ತಹ್ಲೀಲ್, ಕುರ್’ಆನ್ ಓದಿ ಮಗ್ಫಿರತ್ಗಾಗಿ ದುಆ ಮಾಡಲು ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ