janadhvani

Kannada Online News Paper

ಬಿ ಸಿ ರೋಡ್ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶದ ಪ್ರಚಾರ ಸಭೆ

ಮಂಗಳೂರು : ಕರ್ನಾಟಕದ ಸುನ್ನಿ ಸಂಘ ಕುಟುಂಬದ ಬಹು ಜನ ಸಂಘಟನೆಯಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಸಮಿತಿಯು ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರ ನೇತೃತ್ವದಲ್ಲಿ 2019 ಜನವರಿ 27 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅಸ್ತಿತ್ವಕ್ಕೆ ಬರಲಿದ್ದು,


ಇದರ ಪ್ರಚಾರ ಕರ್ನಾಟಕ ದ ಎಲ್ಲಾ ಜಿಲ್ಲೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದು
ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಚಾರ ಸಭೆಯು ಬಿ ಸಿ ರೋಡ್ ಸ್ಪರ್ಶ ಹಾಲ್ ನಲ್ಲಿ SJM ರಾಜ್ಯಧ್ಯಕ್ಷ ಆತೂರ್ ಸಅದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಸಯ್ಯಿದ್ ಹಸನುಲ್ ಅಹ್ದಲ್ ತಂಙಲ್ ದುಆ ದೊಂದಿಗೆ ಪ್ರಾರಂಭ ಗೊಂಡು SYS ರಾಜ್ಯ ನಾಯಕ ಮೂಳೂರು ಸಿದ್ದೀಖ್ ಸಖಾಫಿ ಉದ್ಘಾಟಿಸಿದರು.
ಮೌಲಾನಾ ಶಾಫಿ ಸಅದಿ ಯವರು ಬೆಂಗಳೂರಲ್ಲಿ ನಡೆಯಲಿರುವ ಘೋಷಣಾ ಸಮಾವೇಶದ ಬಗ್ಗೆ ಮುನ್ನುಡಿ ಮಾಹಿತಿ ನೀಡಿದರು.
ಸಮಾವೇಶ ದ ಪ್ರಚಾರ ಕ್ಕಾಗಿ ವಿವಿಧ ರೀತಿಯ ಚರ್ಚೆ ನಡೆಸಿ. ಪ್ರತೀ SYS ಬ್ರಾಂಚ್ ಮತ್ತು SSF ಯುನಿಟ್ ನಿಂದ ಬಸ್ ವ್ಯವಸ್ಥೆ ಗೆ ಸೂಚನೆ ನೀಡಲಾಯಿತು.
ಸಭೆಯಲ್ಲಿ.
ಸಾದಾತ್ ತಂಙಳ್ ಕರ್ವೇಲ್
ಸುನ್ನಿ ಪೈಝಿ,
SSF ಸುಪ್ರೀಂ ಕೌನ್ಸಿಲ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಮಲೆಬೆಟ್ಟು
ಜಿಲ್ಲಾ ದ್ಯಕ್ಷ ಸಿರಾಜುದ್ದೀನ್ ಸಖಾಫಿ
SJM ಮಂಗಳೂರು ಜಿಲ್ಲಾಧ್ಯಕ್ಷ ಪಿ ಎ ಮುಹಮ್ಮದ್ ಮದನಿ
ಪುತ್ತೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಆದಂ ಮದನಿ
SMA ಮಂಗಳೂರು ಜಿಲ್ಲಾ ದ್ಯಕ್ಷ ಖತರ್ ಬಾವ ಹಾಜಿ
SMA ಪುತ್ತೂರು ಜಿಲ್ಲಾ ದ್ಯಕ್ಷ ಹಮೀದ್ ಹಾಜಿ,ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಮುಂಡಾಜೆ,
SYS ನಾಯಕ ರಾದ ಹನೀಪ್ ಹಾಜಿ,
ಉಮರ್ ಮಾಸ್ಟರ್, ಖಾಸಿಂ ಪದ್ಮುಂಜ ಉರುಮನೆ ಸಅದಿ, ಖಲೀಲ್ ಕಾವೂರು, ಹಾಗೂ ಜಿಲ್ಲಾ ಸುನ್ನಿ ಸಂಘ ಕುಟುಂಬ ದ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು ಜಿಲ್ಲಾ SYS ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ ಮಂಗಳೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

error: Content is protected !! Not allowed copy content from janadhvani.com