ಮಾಣಿ : ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಮಾಣಿ ರೇಂಜ್ ಇದರ ವತಿಯಿಂದ ಮದ್ರಸಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನೊಳಗೊಂಡ “ಪ್ರತಿಭಾ ಸಂಗಮ” ಕಾರ್ಯಕ್ರಮವು ಆದಿತ್ಯವಾರ ಮಾಣಿ ದಾರುಲ್ ಇರ್ಶಾದ್ ವಠಾರದಲ್ಲಿ ನಡೆಯಿತು,ಮಾಣಿ ರೇಂಜ್ ಎಸ್ ಜೆ ಎಂ ಅಧ್ಯಕ್ಷರಾದ ಅಬೂಬಕರ್ ಸಖಾಫಿ ಗಡಿಯಾರ್ ರವರ ಅಧ್ಯಕ್ಷತೆಯಲ್ಲಿ,ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಆದಂ ಮದನಿ ಪುತ್ತೂರು ಪ್ರಾಸ್ತಾವಿಕ ಭಾಷಣ ಮಾಡಿದರು,ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿಯ ಪ್ರಿನ್ಸಿಪಾಲ್ ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಪ್ರಭಾಷಣ ನಡೆಸಿದರು,
![](https://i2.wp.com/janadhvani.com/wp-content/uploads/2019/01/IMG-20190101-WA0101.jpg?fit=715%2C402&ssl=1)
ವೇದಿಕೆಯಲ್ಲಿ ಶರೀಫ್ ಸಖಾಫಿ ಮಾಣಿ,ಹನೀಫ್ ಸಖಾಫಿ ಸೂರ್ಯ,ನಾಸಿರ್ ಸಖಾಫಿ ಪೇರಮೊಗರು,ಜಬ್ಬಾರ್ ಮದನಿ ಪೇರಮೊಗರು,ಶರೀಫ್ ಝುಹ್ರಿ ಸತ್ತಿಕಲ್ಲು,ಹೈದರ್ ಸಖಾಫಿ ಕೆಮ್ಮಾನ್ ಕಜೆ,ಇಬ್ರಾಹಿಂ ಮದನಿ ಬುಡೋಳಿ,ರಫೀಕ್ ಮದನಿ ಬರಿಮಾರು,ಹಬೀಬ್ ಶೇರಾ,ಮುಂತಾದ ಹಲವಾರು ಉಲಮಾ ಉಮರಾ ನೇತಾರರು ಉಪಸ್ಥಿತರಿದ್ದರು,ಒಟ್ಟು ಒಂಭತ್ತು ಮದ್ರಸಾಗಳು ಭಾಗವಹಿಸಿದ್ದ ಪ್ರತಿಭಾ ಸಂಗಮದಲ್ಲಿ ಪ್ರಥಮ ಪೇರಮೊಗರು ಮದ್ರಸಾ ದ್ವಿತೀಯ ಕೆಮ್ಮಾನ್ ಕಜೆ ಮದ್ರಸಾ ತೃತೀಯ ಶೇರಾ ಮದ್ರಸಾ ಪ್ರಶಸ್ತಿಗಳನ್ನು ಪಡೆದುಕೊಂಡಿತು, ವೈಯಕ್ತಿಕ ಚಾಂಪಿಯನ್ ಗಳಾಗಿ ಇಯಾಝ್ ಕೆಮ್ಮಾನ್ ಕಜೆ,ಅಜ್ಮಲ್ ಮಾಣಿ,ಅಶ್’ಹರ್ ಪೇರಮೊಗರು ಪ್ರಶಸ್ತಿಗಳನ್ನು ಪಡೆದುಕೊಂಡರು,ಸಮಿತಿಯ ಕನ್ವೀನರ್ ಅಬ್ದುಲ್ ಲತೀಫ್ ಸಅದಿ ಶೇರಾ ಸ್ವಾಗತಿಸಿದರು,ದಾರುಲ್ ಇರ್ಶಾದ್ ಅಧ್ಯಾಪಕರಾದ ನಝೀರ್ ಅಹ್ಮದ್ ಅಮ್ಜದಿ ಸರಳಿಕಟ್ಟೆ ಧನ್ಯವಾದ ಸಮರ್ಪಿಸಿದರು.