ಉಳ್ಳಾಲ:ಪ್ರವಾದಿ (ಸ.ಅ) ರವರನ್ನು ನಿಂದನೆ ಮಾಡಿ ಕೋಮು ಸಂಘರ್ಷಕ್ಕೆ ಪ್ರಚೋದನೆ ಮಾಡುವ ರೀತಿಯಲ್ಲಿ ಮಾಧ್ಯಮದ ಸಿದ್ದಾಂತಕ್ಕೆ ಅಗೌರವ ತೋರಿ,ಮುಸ್ಲಿಮರ ಭಾವನಯನ್ನು ಕೆರಳಿಸಿದ ಸುವರ್ಣ ನ್ಯೂಸ್ ಚಾನಲ್ ನಿರೂಪಕ ಅಜಿತ್ ಹನುಮಕ್ಕನವರು ಹಾಗೂ ಸುವರ್ಣ ನ್ಯೂಸ್ ಚಾನಲ್ ವಿರುದ್ದ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ವತಿಯಿಂದ ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ಉಸ್ತಾದರ ನೇತೃತ್ವದಲ್ಲಿ ಕೋಣಾಜೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಈ ಸಮಯದಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮೊಯಿದಿನ್ ಮೋರ್ಲ, ಸೆಕ್ಟರ್ ನಾಯಕರಾದ ಹಮೀದ್ ಬಂಡಸಾಲೆ, ಹಸೈನಾರ್ ಝುಹ್ರಿ ಮೋರ್ಲ, ಶರೀಫ್ ಕಲ್ಕಟ್ಟ, ಅನೀಸ್ ಕೊಳ್ಳರಕೋಡಿ, ಮುನೀರ್ ಕಲ್ಮಿಂಜ, ಝಾಹಿದ್ ಸಾರ್ತಬೈಲ್, ಶಬೀರ್ ಕೊಳ್ಳರಕೋಡಿ, ರಝೀನ್ ಕಲ್ಕಟ್ಟ, ಆಮಿರ್ ಕೊಳ್ಳರಕೋಡಿ,ಇರ್ಶಾದ್ ಮುಸ್ಲಿಯಾರ್ ಮಂಜನಾಡಿ, ಫಾರೂಕ್ ಸುನ್ನಂಗಳ, ಅಶ್ರಫ್ ಕಲ್ಕಟ್ಟ, ಹಕೀಂ ಮುಸ್ಲಿಯಾರ್ ಅನ್ಸಾರ್ ನಗರ, ಲತೀಫ್ ಮೋರ್ಲ, ಸಫ್ವಾನ್ ಕಲ್ಕಟ್ಟ. ಹಾಗೂ SYS ನಾಯಕರುಗಳಾದ ಇಸ್ಮಾಈಲ್ ಮೋರ್ಲ, ರೌಫ್ ಮೋರ್ಲ ಮೊದಲಾದವರು ಉಪಸ್ಥಿತರಿದ್ದರು.