janadhvani

Kannada Online News Paper

ಅಲ್ ಮದೀನ ಮಂಜನಾಡಿ:ಬೆಳ್ಳಿಹಬ್ಬ ಧ್ವಜ ಮದೀನಾದಲ್ಲಿ ಹಸ್ತಾಂತರ

ಸೌದಿ ಅರಬೀಯಾ: ಅಲ್ ಮದೀನ ಮಂಜನಾಡಿ ಸಂಸ್ಥೆಯ ಬೆಳ್ಳಿ ಹಬ್ಬ ಸಮ್ಮೇಳನ ಧ್ವಜವನ್ನು ಮದೀನಾ ಮುನವ್ವರದಲ್ಲಿ ಅಲ್ ಮದೀನ ಕಾರ್ಯಕರ್ತರು ಶೈಖುನಾ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರಿಗೆ ಹಸ್ತಾಂತರಿಸಿದರು.ಸಂಸ್ಥೆಯ ಇಪ್ಪತ್ತೈದು ಸಮಾಜಮುಖಿ ಯೋಜನೆಗಳಲ್ಲಿ ಒಂದಾದ ಪುಸ್ತಕ ಬಿಡುಗಡೆ ಅಂಗವಾಗಿ ಅಲ್ ಮದೀನ ದಅ್ ವಾ ವಿದ್ಯಾರ್ಥಿ ಬರೆದ ಮದೀನಾ ನನ್ನ ಹಬೀಬರ ನಾಡು ಪುಸ್ತಕ ಪ್ರಕಾಶನಗೈದರು.

ಈ ಸಂಧರ್ಭದಲ್ಲಿ ಅಲ್ ಮದೀನಾ ಅಬುಧಾಬಿ ಘಟಕದ ಉಪಾಧ್ಯಕ್ಷ ಪುತ್ತು ಮೋರ್ಲ, ದುಬೈ ಕಮಿಟಿಯ ನಝೀರ್ ಹಾಜಿ, ಅಬ್ದುರ್ರವೂಫ್ ಜಾರಿಗೆಬೈಲ್ ಸಹಿತ ಅಲ್ ಮದೀನದ ಹಿತೈಷಿಗಳು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com