ಜಿದ್ದಾ: ಸೌದಿ ಅರೇಬಿಯಾ ಸೇರಿದಂತೆ ತನ್ನ ಅಂತಾರಾಷ್ಟ್ರೀಯ ವಿಮಾನ ಸೇವೆಗಳಿಗೆ ಶೇಕಡಾ 15 ರವರೆಗೆ ಟಿಕೆಟ್ ದರ ಕಡಿತವನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಿಸಿದೆ. ಜುಲೈ ಒಂಬತ್ತರವರೆಗೆ ಟಿಕೆಟ್ ಬುಕ್ ಮಾಡುವವರಿಗೆ ಈ ಆಫರ್ ಲಭ್ಯವಿರಲಿದೆ. ರಜಾದಿನಗಳನ್ನು ಆಚರಿಸಲು ತಾಯ್ನಾಡಿಗೆ ಪ್ರಯಾಣಿಸುವ ಪ್ರವಾಸಿಗರಿಗೆ (ಅನಿವಾಸಿಗಳಿಗೆ) ಈ ಪ್ರಕಟಣೆ ದೊಡ್ಡ ಸಮಾಧಾನ ತಂದಿದೆ.
ಇಂದಿನಿಂದಲೇ ಈ ಟಿಕೆಟ್ ದರ ಕಡಿತದ ಸೌಲಭ್ಯ ಲಭ್ಯವಾಗಲಿದೆ. ಮುಂದಿನ ವರ್ಷದ ಮಾರ್ಚ್ 27 ರವರೆಗಿನ ಪ್ರಯಾಣದ ಅವಧಿಗೆ ಈ ರಿಯಾಯಿತಿ ಸಿಗಲಿದೆ. ಇದಕ್ಕಾಗಿ ಜುಲೈ 9 ರ ಒಳಗಾಗಿ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕಡಿಮೆ ದರ ಮತ್ತು ಸ್ಟ್ಯಾಂಡರ್ಡ್ ದರ ಹೊಂದಿರುವ ‘ಎಕ್ಸ್ಪ್ರೆಸ್ ಲೈಟ್’ ಮತ್ತು ‘ಎಕ್ಸ್ ವ್ಯಾಲ್ಯೂ’ ಟಿಕೆಟ್ಗಳಲ್ಲಿ ಈ ರಿಯಾಯಿತಿ ಅನ್ವಯಿಸುತ್ತದೆ. ಮೊಬೈಲ್ ಆಪ್ ಹಾಗೂ ಅಧಿಕೃತ ವೆಬ್ಸೈಟ್ ಮೂಲಕ ಬುಕ್ ಮಾಡುವವರಿಗೆ ಯಾವುದೇ ಬುಕ್ಕಿಂಗ್ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಇದರೊಂದಿಗೆ, ಒಂದು ಬಾರಿ ಉಚಿತವಾಗಿ ಪ್ರಯಾಣದ ದಿನಾಂಕವನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನೂ ನೀಡಲಾಗಿದೆ. ಸೌದಿ ಅರೇಬಿಯಾ, ಯುಎಇ, ಕತಾರ್, ಕುವೈತ್, ಒಮಾನ್, ಬಹ್ರೇನ್, ಸಿಂಗಾಪುರ, ಬ್ಯಾಂಕಾಕ್ ಮತ್ತು ಫುಕೆಟ್ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ವಲಯಗಳ ಪ್ರಯಾಣಕ್ಕೆ ಈ ಆಫರ್ ಅನ್ವಯವಾಗುತ್ತದೆ.















ಇನ್ನಷ್ಟು ಸುದ್ದಿಗಳು
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮರುಪರಿಶೀಲಿಸುವಂತೆ ಕೆಸಿಎಫ್ ಆಗ್ರಹ
ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಸಾಹಿತ್ಯೋತ್ಸವ- ಸ್ವಾಗತ ಸಮಿತಿ ರಚನೆ
ಕಾಂತಪುರಂ ಉಸ್ತಾದ್ ಹೆಸರಿನಲ್ಲಿ ನಕಲಿ ಪೋಸ್ಟ್ ಮತ್ತು ವಿಡಿಯೋ- ಸೋಶಿಯಲ್ ಮೀಡಿಯಾ ವಿರುದ್ಧ ದೂರು ದಾಖಲು
ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ನಿಂದ ತಹ್ಲೀಲ್ ಸಮರ್ಪಣೆ, ತ್ವಾಖಾ ಉಸ್ತಾದ್ ಅನುಸ್ಮರಣೆ
ವಲಸಿಗರಿಗೆ ಶುಭ ಸುದ್ದಿ: ಸೌದಿ ವರ್ಕ್ ಪರ್ಮಿಟ್ ಸ್ಥಿತಿ ಸರಿಪಡಿಸಿಕೊಳ್ಳುವ ಗಡುವು ವಿಸ್ತರಣೆ
ಸೆಂಟಿನರಿ ಸೆನೆಟ್ ಹಾಗೂ ನಾಟು ದರ್ಸ್ ಉದ್ಘಾಟನೆ: ಸ್ಥಳೀಯ ಸ್ವಾಗತ ಸಮಿತಿ ರಚನೆ
‘ಅವನು ಬದುಕಿದ್ದರೆ ನಾನು ಕೂಡ ಬದುಕುತ್ತೇನೆ’; ಭೂಕಂಪದ ಅವಶೇಷಗಳ ನಡುವೆ ಮರಣವನ್ನೇ ಗೆದ್ದು ಬಂದ ತಾಯಿ ಮತ್ತು 18 ದಿನದ ಮಗು!
ಡಿಕೆಯಸ್ಸಿ ಝೈದಿ ಘಟಕದ ವಾರ್ಷಿಕ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ
ಗಲ್ಫ್ ಸಂಘರ್ಷ: ಬಹ್ರೇನ್ ವಿರುದ್ಧ ದಾಳಿ ಮುಂದುವರಿಸಿದ ಇರಾನ್
ಡಿಕೆಯಸ್ಸಿ ಮಕ್ಕತುಲ್ ಮುಕರ್ರಮಃ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ