ಕರ್ನಾಟಕ ರಾಜ್ಯ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ (SSF) “ಯೌವ್ವನ ಮರೆಯಾಗುವ ಮುನ್ನ” ಎಂಬ ಘೋಷ ವಾಕ್ಯದೊಂದಿಗೆ ರಾಜ್ಯಾದ್ಯಂತ ಎಲ್ಲಾ ಶಾಖೆಗಳಲ್ಲಿ “ಯುನಿಟ್ ಸಮ್ಮೇಳನ“ ನಡೆಯುತ್ತಿರುವಾಗ ಉರುವಾಲು ಪದವು ಶಾಖೆಯಲ್ಲಿ ಯುನಿಟ್ ಸಮ್ಮೇಳನ ಮತ್ತು ಮಹ್ಳರತುಳ್ ಬದ್ರಿಯ್ಯಾ ಇದೇ ಬರುವ ತಾರೀಕು ಅಕ್ಟೋಬರ್ 27’ರಂದು ಬಾಖಿಯಾತು ಸ್ವಾಲಿಹಾತು ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ರಾತ್ರಿ 7 ಗಂಟೆಗೆ ಮಹ್ಳರತುಳ್ ಬದ್ರಿಯ್ಯಾ ಮಸ್ಊದ್ ಸ-ಅದಿ ನಡೆಸಿಕೊಡಲಿದ್ದಾರೆ . ನಂತರ ನಡೆಯುವ ಯುನಿಟ್ ಕಾನ್ಫರೆನ್ಸ್ ಕಾರ್ಯಕ್ರಮವು ಎಸ್ಸೆಸ್ಸೆಫ್ ಉರುವಾಲು ಪದವು ಶಾಖಾಧ್ಯಕ್ಷರಾದ ಸಿದ್ದೀಖ್ ಎಂ.ಪಿ ’ರವರ ಅಧ್ಯಕ್ಷತೆಯಲ್ಲಿ, BSJM ಜುಮಾ ಮಸೀದಿ ಖತೀಬರಾದ ಅಬ್ಬಾಸ್ ಮದನಿ ಉಸ್ತಾದ್ ಉದ್ಘಾಟಿಸಲಿದ್ದಾರೆ.
ನಂತರ ಶಾಖಾ SSF ಸ್ಥಾಪಕರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ತದನಂತರ
ಎಸ್.ಎಮ್.ಎ ಕರ್ನಾಟಕ ರಾಜ್ಯ ಕಾರ್ಯದರ್ಶಿಯಾದ ಅಶ್ರಫ್ ಸಖಾಫಿ ಮಾಡಾವು ಯೌವ್ವನ ಮರೆಯಾಗುವ ಮುನ್ನ ಇದರ ಕುರಿತು ಅರ್ಥ ಗರ್ಭಿತ ಪ್ರಭಾಷಣ ನಡೆಸಲಿದ್ದಾರೆ,
ನಂತರ ಶಾಖಾ ಕಾರ್ಯದರ್ಶಿ ಬದ್ರುದ್ದೀನ್ ಧನ್ಯವಾದ ಹಾಗೂ SSF ಕುಪ್ಪೆಟ್ಟಿ ಸೆಕ್ಟರ್ ಕಾರ್ಯದರ್ಶಿ ರಹೀಂ ಸಖಾಫಿ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.