janadhvani

Kannada Online News Paper

SSF ನಿಂದ ನೆರೆ ಪರಿಹಾರ ನಿಧಿ ಹಸ್ತಾಂತರ

SSF ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ನಗರವೊಂದರಲ್ಲೇ ಸಂಗ್ರಹಿಸಲಾದ 100000 (ಒಂದು ಲಕ್ಷ) ರೂಪಾಯಿಗಳನ್ನೂ ಹಾಗೂ ಬಾಳೆಹೊನ್ನೂರು ಡಿವಿಶನ್ ಸಂಗ್ರಹ ಮಾಡಿದ 21200 ರೂ ಮತ್ತು ಸುಮಾರು 20000 ಮೊತ್ತ ದ ನೋಟ್ ಬುಕ್ ಗಳನ್ನೂ ಜಿಲ್ಲಾ SSF, SYS ಮತ್ತು ಮೊಹಲ್ಲಾ ಜಮಾಅತ್ ನಾಯಕರ ಸಮ್ಮುಖದಲ್ಲಿ ರಾಜ್ಯ SSF ನಾಯಕರಿಗೆ ಹಸ್ತಾಂತರಿಸಲಾಯಿತು. ಇದೇ ವೇಳೆ ಜಮಾಅತ್ ಗಳಲ್ಲಿ ಸಂಗ್ರಹಿಸಲಾದ 16160 ರೂಪಾಯಿಯನ್ನು ಸಹ ರಾಜ್ಯ ಸುನ್ನೀ ಕೋ-ಓರ್ಡಿನೇಟ್ ಸಮಿತಿಯ ನಾಯಕರಿಗೆ ಹಸ್ತಾಂತರಿಸಲಾಯಿತು.
ಚಿಕ್ಕಮಗಳೂರು ಬದ್ರಿಯ್ ಮಸೀದಿಯಲ್ಲಿ ನಡೆದ ಸರಳ ಕಾರ್ಯಕ್ರಮ ದಲ್ಲಿ ರಾಜ್ಯ SYS ಉಪಾಧ್ಯಕ್ಷ ಉಪ್ಪಳ್ಳಿ ತಂಙಳ್, ಕೋಶಾಧಿಕಾರಿ ಯೂಸುಫ್ ಹಾಜಿ ಉಪ್ಪಳ್ಳಿ, SSF ಜಿಲ್ಲಾಧ್ಯಕ್ಷ ಹಾಮೀಂ ತಂಙಳ್, ರಾಜ್ಯ ನಾಯಕರಾದ ಹುಸೈನ್ ಸ ಅದಿ ಹೊಸ್ಮಾರು, ಉಸ್ಮಾನ್ ಹಂಡುಗುಳಿ, ಜಿಲ್ಲಾ ನಾಯಕರಾದ ಮುನೀರ್, ಮುಸ್ತಫಾ ಝುಹ್ರಿ, ಸಫ್ವಾನ್ ಸಖಾಫಿ, ಇಬ್ರಾಹೀಂ ಸ ಅದಿ, ಇಸ್ಮಾಈಲ್ ಲತೀಫಿ, ಇಬ್ರಾಯಾಕ ಮುಂತಾದವರು ಉಪಸ್ಥಿತರಿದ್ದರು.
ಡಿವಿಶನ್ ಅಧ್ಯಕ್ಷ ರಫೀಖ್ ಸಖಾಫಿ, ಸದಸ್ಯರಾದ ಖಲಂದರ್ ಸಖಾಫಿ, ತಸ್ಲೀಂ, ಮೀರಾನ್, ಖಾದರ್ ಮುಸ್ಲಿಯಾರ್, ಜ.ಕಾರ್ಯದರ್ಶಿ ಇರ್ಫಾನ್, ಸಯ್ಯಿದ್ ಅಲಿ, ಫಾರೂಖ್ ಮುಸ್ಲಿಯಾರ್, ನಝೀರ್ ಉಪ್ಪಳ್ಳಿ, ಶಾಹುಲ್ ಹಮೀದ್ ಸಖಾಫಿ, ಸಫ್ವಾನ್-ಶಾಹೀನ್ ಬದ್ರಿಯ್ಯ , ಫೈಝಲ್ ಶಕ್ತಿ ನಗರ ಮುಂತಾದವರ ಶಕ್ತಿ ಮೀರಿದ ಪ್ರಯತ್ನವನ್ನು ಸ್ಮರಿಸಲಾಯ್ತು ಹಾಗೂ ದಾನಿಗಳಿಗೂ ಎಲ್ಲಾ ನಾಯಕ -ಕಾರ್ಯಕರ್ತರಿಗೂ ಅಲ್ಲಾಹು ಅರ್ಹ ಫಲವನ್ನೂ ಪ್ರತಿಫಲವನ್ನೂ ನೀಡಲಿ ಎಂಬ ಪ್ರಾರ್ಥನೆ ಯೊಂದಿಗೆ ಅಭಿನಂದಿಸಲಾಯ್ತು.

error: Content is protected !! Not allowed copy content from janadhvani.com