ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋಮು ದ್ರುವೀಕರಣ, ಕೋಮು ದ್ವೇಷ ಭಾಷಣಗಳು, ಗುಂಪು ಹತ್ಯೆಗಳು ನಡೆಯುತ್ತಿರುವ ಈ ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ರಾಜ್ಯ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಅಂಚೆ ಕಾರ್ಡ್ ಚಳುವಳಿ ನಡೆಸಲಾಗುವುದು.
ಪ್ರತೀ ಯೂನಿಟ್ ಗಳ ಸಂಘ ಕುಟುಂಬದ ಕಾರ್ಯಕರ್ತರಿಂದ ಮೇ 6 ಮಂಗಳವಾರದಂದು ಎಸ್.ವೈ.ಎಸ್ ದ.ಕ ಜಿಲ್ಲಾ ವೆಸ್ಟ್ ಸಮಿತಿ ವತಿಯಿಂದ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ರವರ ನೇತೃತ್ವದಲ್ಲಿ ಅಂಚೆ ಕಾರ್ಡ್ ಚಳುವಳಿ ನಡೆಯಲಿದೆ.
ಕರ್ನಾಟಕ ರಾಜ್ಯ ಮಾನ್ಯ ಮುಖ್ಯ ಮಂತ್ರಿಗಳಿಗೆ ನೇರವಾಗಿ ಬರೆಯುವ ಅಂಚೆ ಕಾರ್ಡ್ ಚಳುವಳಿಯಲ್ಲಿ ಸಂಘ ಕುಟುಂಬದ ಸುಮಾರು 25000 ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಎಸ್.ವೈ.ಎಸ್ ದ.ಕ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.