janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಝೋನ್ ಗೆ ನೂತನ‌ ಸಾರಥ್ಯ

ಮಂಗಳೂರು : ಕರ್ನಾಟಕ ರಾಜ್ಯಾದ್ಯಾಂತಹ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವಾರಂಗದಲ್ಲಿ ಬಲಿಷ್ಠ ವಾಗುತ್ತಿರುವ ರಾಜ್ಯದ ವಿವಿಧ ಭಾಗದಲ್ಲಿ ಸಂಘ ಶಕ್ತಿ ಯಾಗಿ ಮುನ್ನುಗ್ಗುತ್ತಿರುವ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಮಂಗಳೂರು ಝೋನ್ ಮಹಾಸಭೆ ಮೇ 4 ರಂದು ಅಡ್ಯಾರ್ ಕಣ್ಣೂರು ಸುನ್ನಿ ಸೆಂಟರ್‌ ನಲ್ಲಿ ವಿ ಎ ಮುಹಮ್ಮದ್ ಸಖಾಫಿ ಅಧ್ಯಕ್ಷ ತೆಯಲ್ಲಿ ನಡೆಯಿತು.

ಬಷೀರ್ ಮದನಿ ಕುಳೂರು ಸಭೆಯನ್ನು ಉದ್ಘಾಟಿಸಿದರು. ವರದಿ ಹಾಗೂ ಲೆಕ್ಕಪತ್ರ ಮಂಡನೆ ನಂತರ ಅಧ್ಯಕ್ಷರ ಬಾಷಣವೂ ನಡೆಯಿತು. ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ರಹೀಂ ಸ ಅದಿ ಸಂಘಟನಾ ಮಹಾಸಭೆಗಳ ನಿಲುವಳಿ ಮಂಡಿಸಿದರು. ವೀಕ್ಷಕರಾಗಿ ಮುಹಮ್ಮದ್ ಸಾಮಣಿಗೆ ಮದನಿ ನೇತೃತ್ವ ನೀಡಿದರು.
2025-26 ನೇ ಸಾಲಿನ ಸಮಿತಿಗೆ
ಅಧ್ಯಕ್ಷ ರಾಗಿ ವಿ ಎ ಮುಹಮ್ಮದ್ ಸಖಾಫಿ ವಳವೂರು .ಪ್ರದಾನ ಕಾರ್ಯದರ್ಶಿ ಯಾಗಿ ಅಬ್ದುಲ್ ಹಮೀದ್ ಬೋಂದೆಲ್, ಕೋಶಾಧಿಕಾರಿಯಾಗಿ ಬಿ ಎ ಸಲೀಂ ಅಡ್ಯಾರ್ ಪದವು , ಉಪಾಧ್ಯಕ್ಷ ರಾಗಿ ಬಷೀರ್ ಅಹ್ಮದ್ ಪಂಜಿಮುಗೇರು , ದ ಅ್ ವಾ ಕಾರ್ಯದರ್ಶಿ ಯಾಗಿ ಬಷೀರ್ ಮದನಿ‌ ಕುಳೂರು, ಸಂಘಟನಾ ಕಾರ್ಯದರ್ಶಿ ಯಾಗಿ ಬದ್ರುದ್ದೀನ್ ಅಡ್ಯಾರ್ ಪದವು,ಇಸಾಬ ಕಾರ್ಯದರ್ಶಿ ಯಾಗಿ ಅಬ್ದುಲ್ ಖಾದರ್ ಕಾವೂರು ,ಸಹಾಯ್ ಕಾರ್ಯದರ್ಶಿ ಯಾಗಿ ಬಿ ಎ ಅಬ್ದುಲ್ ಹಮೀದ್ ಬೆಂಗರೆ , ಮೀಡಿಯಾ ಕಾರ್ಯದರ್ಶಿ ಯಾಗಿ ಅಬ್ದುಲ್ ಪಲುಲ್ ಪೆರಿಮಾರ್, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ಸಿದ್ದೀಖ್ ಹಾಜಿ ಪರಂಗಿಪೇಟೆ, ಆಂತರಿಕ ವ್ಯವಹಾರ ಕಾರ್ಯದರ್ಶಿ ಅಬ್ದುಲ್ ಖಾದರ್ ಕಣ್ಣೂರು ಹಾಗೂ ಸದಸ್ಯರುಗಳಾಗಿ ಅಶ್ರಫ್ ಕಿನಾರ ಮಂಗಳೂರು, ಹಸನ್ ಮುಸ್ಲಿಯಾರ್ ಖಾದಿಮುಲ್ ಮರ್ಕಝ್, ಅಬ್ಬಾಸ್ ಹಾಜಿ ಬಿಜೈ ,ಇಬ್ರಾಹೀಂ ಬೆಂಗರೆ, ಅಬ್ದುಲ್ ರಹಿಮಾನ್ ಹಾಜಿ ಕೊಪ್ಪಳ, ಸುಲೈಮಾನ್ ಮುಸ್ಲಿಯಾರ್ ಅರಫ, ಶೇಕುಂಞ ಹಾಜಿ, ಅಬ್ದುಲ್ ಹಕೀಂ ಮಾಯಿಲಾ, ಅಬ್ದುಲ್ ಜಬ್ಬಾರ್ ಮದನಿ ಕಣ್ಣೂರು,,ಝುಬೈರ್ ಕಣ್ಣೂರು ,ಹನೀಫ್ ಬಿಕರ್ನಕಟ್ಟೆ, ಹಾಫಿಳ್ ಯಾಕೂಬ್ ಸಅದಿ ನಾವೂರು ಎಸ್ ವೈ ಎಸ್, ಅಶ್ರಫ್ ಪಾಳಿಲಿ ಎಸ್ ಎಸ್ ಎಫ್ ಆಯ್ಕೆ ಮಾಡಲಾಯಿತು.