janadhvani

Kannada Online News Paper

ಗ್ಯಾಂಗ್ ವಾರ್ ಆರೋಪಿಗಳು ಅಂದರ್- ಬೆಂಕಿ ಹಚ್ಚುವವರನ್ನು ಹೆಡೆಮುರಿ ಕಟ್ಟುವುದು ಯಾವಾಗ!?

ಕರಾವಳಿಯ ಮೂರಕ್ಕೂ ಹೆಚ್ಚು ಕಡೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೊಲೆಯತ್ನ ನಡೆದಿದ್ದು ಇದಕ್ಕೆ ಸ್ಪಷ್ಟವಾಗಿ ಜಿಲ್ಲೆಗೆ ಬೆಂಕಿ ಹಚ್ಙಲು ಪ್ರಯತ್ನಿಸಿದ ಮಾಧ್ಯಮಗಳು, ರಾಜಕಾರಣಿಗಳು, ಕೋಮುವಾದಿಗಳು ನೇರ ಕಾರಣವಾಗಿದ್ದಾರೆ.

ಎಸ್ ಎಸ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಲಿ ತುರ್ಕಳಿಕೆ ರಾಜ್ಯ ಸರ್ಕಾರಕ್ಕೇ ನೇರ ಸವಾಲು

ಮಂಗಳೂರು: ಕರಾವಳಿಯಲ್ಲಿ ವಾರಗಳ ಒಳಗೆ ಹತ್ಯೆಯಾದ ಎರಡು ಪ್ರತ್ಯೇಕ ಘಟನೆಗಳು ರಾಜ್ಯದ ಗಮನ ಸೆಳೆದಿದ್ದು, ಕೋಮು ಬಣ್ಣ ಹಚ್ಚುವ ದೊಡ್ಡ ಷಡ್ಯಂತ್ರವೊಂದು ಬಿಲಸೇರಿದೆ. ಅಶ್ರಫ್ ಎಂಬ ಅಮಾಯಕ ಮಾನಸಿಕ ಅಸ್ವಸ್ಥ ನನ್ನು ಗುಂಪು ಹತ್ಯೆ ಮಾಡಿದ ಅಕ್ರಮಿಗಳ ಬಗ್ಗೆ ತುಟಿ ಬಿಚ್ಚದ ಮಾಧ್ಯಮಗಳು, ನಟೋರಿಯಸ್ ರೌಡಿ ಬಗ್ಗೆ ವ್ಯಾಪಕವಾದ ಪ್ರಚಾರ ಕೊಟ್ಟು ಕರಾವಳಿಗೆ ಬೆಂಕಿ ಹಚ್ಚುವ ಕೆಲಸ ಮಾಡಿದೆ.

ಇದೀಗ ಆರೋಪಿಗಳ ಬಂಧನವಾಗಿದ್ದು, ಪ್ರತೀಕಾರದ ಗ್ಯಾಂಗ್ ವಾರ್ ಆಗಿ ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಆದರೆ ಈ ನಡುವೆ ಕರಾವಳಿಯ ಮೂರಕ್ಕೂ ಹೆಚ್ಚು ಕಡೆ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೊಲೆಯತ್ನ ನಡೆದಿದ್ದು ಇದಕ್ಕೆ ಸ್ಪಷ್ಟವಾಗಿ ಜಿಲ್ಲೆಗೆ ಬೆಂಕಿ ಹಚ್ಙಲು ಪ್ರಯತ್ನಿಸಿದ ಮಾಧ್ಯಮಗಳು, ರಾಜಕಾರಣಿಗಳು, ಕೋಮುವಾದಿಗಳು ನೇರ ಹೊಣೆಗಾರರಾಗಿದ್ದಾರೆ.

ಕರಾವಳಿಯಲ್ಲಿ ನಿರಂತರವಾಗಿ ನಡೆಯುವ ಇಂತಹ ಕೋಮುದ್ವೇಷ ಗಲಭೆಗಳಿಗೆ ಬೆಂಕಿ ಹಚ್ಙುವ ದ್ವೇಷ ಭಾಷಣಗಳು ಪ್ರಮುಖ ಕಾರಣ. ಇದನ್ನು ಚಿವುಟಿ ಹಾಕಲು ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಎಲ್ಲಾ ಸರ್ಕಾರಗಳು ನಿಷ್ಕ್ರಿಯವಾಗಿದ್ದು ,ಯಾರಿಂದಲೂ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ. ಆದ್ದರಿಂದ ಈ ಗಲಭೆಯ ಹಿಂದಿನ ಕೋಮು ಭಾಷಣಗಳನ್ನೂ , ಮಾಧ್ಯಮ ವರ್ತನೆಗಳನ್ನೂ ನಿಯಂತ್ರಣಕ್ಕೆ ತಾರದಿದ್ದಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಬಲುದೊಡ್ಡ ಬೆಲೆ ಭವಿಷ್ಯದಲ್ಲಿ ತೆರಬೇಕಾಗುತ್ತದೆಂದು ಅಲಿ ತುರ್ಕಳಿಕೆ ಎಚ್ಚರಿಸಿದರು.

ಸರ್ಕಾರ ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಎಚ್ಚರಗೊಳ್ಳದಿದ್ದರೆ, ಕರ್ನಾಟಕ ರಾಜ್ಯ ಎಸ್ ಎಸ್ ಎಫ್, ಆಡಳಿತ ಸರ್ಕಾರವನ್ನು ಎಚ್ಚರಿಸಲು ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಅಲಿ ತುರ್ಕಳಿಕೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.