ಮಂಗಳೂರು,ಮೇ.3: ಇಲ್ಲಿನ ಹೊರವಲಯದ ಬಜ್ಪೆಯಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಈ ಕುರಿತು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಅಬ್ದುಲ್ ಸಫ್ವಾನ್, ನಿಯಾಜ್, ಮೊಹಮ್ಮದ್ ಮುಝಮ್ಮಿಲ್, ಕಲಂದರ್ ಶಾಫಿ, ಆದಿಲ್ ಮೆಹರೂಪ್, ನಾಗರಾಜ್, ಮೊಹಮ್ಮದ್ ರಿಜ್ವಾನ್ ಮತ್ತು ರಂಜಿತ್ ಎಂಬುವರನ್ನು ಬಂಧಿಸಲಾಗಿದೆ ಎಂದರು.
ಆರು ಜನ ಸೇರಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಿದ್ದಾರೆ. ಇದರಲ್ಲಿ ಆರೋಪಿ ಸಫ್ವಾನ್ ಮೇಲೆ 2023 ರಲ್ಲಿ ಮಾರಣಾಂತಿಕ ಹಲ್ಲೆಯಾಗಿತ್ತು. ಸುಹಾಸ್ ಶೆಟ್ಟಿ ಸ್ನೇಹಿತರಾದ ಪ್ರಶಾಂತ್, ಪುನೀತ್ ಮತ್ತು ಧನರಾಜ್ ಹಲ್ಲೆ ಮಾಡಿದ್ದರು. ಇದರಿಂದ ಸಫ್ವಾನ್ ಗೆ ಸುಹಾಸ್ ನಿಂದ ಕೊಲೆ ಆತಂಕ ಇತ್ತು. ಈ ಹಿನ್ನಲೆ ಸುಹಾಸ್ ಕೊಲೆ ಮಾಡಲು ತೀರ್ಮಾನ ಮಾಡಿದ್ದ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ಈ ಹಿಂದೆ ಕೊಲೆಯಾದ ಫಾಝಿಲ್ ಸಹೋದರ ಆದಿಲ್ ಅವರನ್ನು ಸಫ್ವಾನ್ ಸಂಪರ್ಕಿಸಿ ಕೊಲೆ ಮಾಡೋಕೆ ತೀರ್ಮಾನ ಮಾಡುತ್ತಾರೆ. ಸುಹಾಸ್ ಕೊಲೆಗೆ ಆದಿಲ್ ನಿಂದ ಸಫ್ವಾನ್ ತಂಡ ಐದು ಲಕ್ಷ ರೂಪಾಯಿ ಪಡೆಯುತ್ತದೆ. ಆ ಬಳಿಕ ನಿಯಾಜ್ ತನ್ನ ಇಬ್ಬರು ಸ್ನೇಹಿತರಾದ ನಾಗಾರಾಜ್ ಮತ್ತು ರಂಜಿತ್ ನ ಸಂಪರ್ಕ ಮಾಡುತ್ತಾರೆ. ಈ ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳಿಂದ ವಾಸ ಮಾಡಿ, ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದರು.
ಕೊಲೆಯಾದ ಸಂದರ್ಭದಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಈ ಇಬ್ಬರು ಮಹಿಳೆಯರನ್ನು ಕರೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಪ್ರಕರಣದಲ್ಲಿ ಹತ್ಯೆಯಾದ ಫಾಝಿಲ್ ಅವರ ಅಣ್ಣ ಆದಿಲ್ ಹಣ ನೀಡಿದ್ದಾದರೆ, ಅದು ಫಾಝಿಲ್ ಹತ್ಯೆಗೆ ಪ್ರತೀಕಾರವಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಮಿಷನರ್, ಇದನ್ನು ಪ್ರತೀಕಾರದ ಹತ್ಯೆ ಎಂದು ಹೇಳಲಾಗದು, ಇದೊಂದು ಮಿಶ್ರಿತ ಕೃತ್ಯವಾಗಿದೆ. ಸಫ್ವಾನ್ ಮತ್ತು ತಂಡವು ನಡೆಸಲು ತೀರ್ಮಾನಿಸಿದ ಹತ್ಯೆ ಸಂಚಿಗೆ, ಆದಿಲನ್ನು ಸಂಪರ್ಕಿಸಿ ಫಂಡ್ ಪಡೆದಿದ್ದಾರೆ ಎಂದರು.
ಒಟ್ಟಿನಲ್ಲಿ ಹೇಳುವುದಾದರೆ, ಆದಿಲ್ ನಿಂದ ಹಣ ಪಡೆದು, ಸಫ್ವಾನ್ ಮತ್ತು ತಂಡ ತಮ್ಮ ಹಳೆಯ ಸೇಡನ್ನು ತೀರಿಸಿದ್ದಾರೆ. ಇದು ನಿಜಕ್ಕೂ ಒಂದು ಗ್ಯಾಂಗ್ ವಾರ್ ಆಗಿದ್ದು, ಜಿಲ್ಲೆಯ ಶಾಂತಿ ಕದಡುವ ಕೃತ್ಯವಾಗಿದೆ. ಇಂತಹಾ ಕೃತ್ಯಗಳು ಮರುಕಳಿಸದಂತೆ ರೌಡಿ ನಿಗ್ರಹ ದಳ ಮತ್ತಷ್ಟು ಚುರುಕುಗೊಳ್ಳಬೇಕಾಗಿದೆ.
















ಇನ್ನಷ್ಟು ಸುದ್ದಿಗಳು
ಶರಫುಲ್ ಉಲಮಾ ಉಸ್ತಾದ್ 7ನೇ ವಾರ್ಷಿಕ ಅನುಸ್ಮರಣೆ – ಮೇ 13, 14 ರಂದು ಪ್ರಾರ್ಥನಾ ಸಂಗಮ
“ನಿಮ್ಮವರೇ ಹೀಗೆ” – ಕೆಎಸ್ಆರ್ಟಿಸಿ ನಿರ್ವಾಹಕನ ನಡತೆಗೆ ಶಿಕ್ಷಕಿಯ ಮನದ ಅಳಲು
ಸಲಪಿ ಸಿದ್ಧಾಂತದ ಮುಖವಾಡ ಕಳಚಿದ ಕರಾವಳಿ: ಸೈದ್ಧಾಂತಿಕ ಸೋಲನ್ನು ಮುಚ್ಚಿಡಲು ದೈಹಿಕ ಹಲ್ಲೆಗೆ ಮುಂದಾದರೇ ಸಲಪಿಗಳು?
ತೈಲ ಬಿಕ್ಕಟ್ಟು: ‘ವರ್ಕ್ ಫ್ರಮ್ ಹೋಮ್’ ಆರಂಭಿಸಿ; ಚಿನ್ನ ಖರೀದಿಸಬೇಡಿ – ಪ್ರಧಾನಿ ಮೋದಿ ಮನವಿ
ತಮಿಳುನಾಡಿನಲ್ಲಿ ಹೊಸ ಇತಿಹಾಸ: ಮುಖ್ಯಮಂತ್ರಿಯಾಗಿ ‘ದಳಪತಿ’ ವಿಜಯ್ ಅಧಿಕಾರ ಸ್ವೀಕಾರ
ಡಿಕೆಎಸ್ಸಿ ರಿಯಾದ್ ಝೋನಲ್ ಸಮಿತಿಗೆ ನೂತನ ಸಾರಥ್ಯ- ಅಧ್ಯಕ್ಷರಾಗಿ ದಾವೂದ್ ಹಕೀಂ ಕಂದಕ್ ಆಯ್ಕೆ
ಎಸ್ಸೆಸ್ಸೆಫ್ 14ನೇ ಆವೃತ್ತಿಯ ಸಾಹಿತ್ಯೋತ್ಸವ: ರಾಜ್ಯ ನಿರ್ವಹಣಾ ಸಮಿತಿ ಅಸ್ತಿತ್ವಕ್ಕೆ
ವಿಜಯ್ ಮುಖ್ಯಮಂತ್ರಿ; ನಾಳೆ ಪ್ರಮಾಣವಚನ ಸ್ವೀಕಾರ- 120 ಶಾಸಕರ ಬೆಂಬಲ ಖಚಿತಪಡಿಸಿದ TVK
ಹಂತಾವೈರಸ್ ಭೀತಿ; ಹೆಚ್ಚಿನ ಪ್ರಕರಣಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ- ಪ್ರವಾಸಿ ಹಡಗುಗಳ ಮೇಲೆ ತೀವ್ರ ನಿಗಾ
ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ- ಕಲ್ಲಂಗಡಿ ಹಣ್ಣಿನಲ್ಲಿ ಇಲಿ ವಿಷ ಹೇಗೆ ಬಂತು?