janadhvani

Kannada Online News Paper

ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!

ಚುರಚಂದಪುರ: ನರಮೇಧ ನಡೆದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮರುಕಳಿಸಿದ್ದು, ರಾಜ್ಯದಲ್ಲಿ ಇನ್ನಷ್ಟು ಕುಕಿ ಸಂಘಟನೆಗಳು ಲೋಕಸಭೆ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿವೆ.

‘ನ್ಯಾಯವಿಲ್ಲದಿದ್ದರೆ ಮತವೂ ಇಲ್ಲ’ ಎಂಬುದು ಅವರ ನಿಲುವು. ಬಹಿಷ್ಕಾರದ ಭಾಗವಾಗಿ ಅಭ್ಯರ್ಥಿಗಳನ್ನು ನಿಲ್ಲಿಸುತ್ತಿಲ್ಲ ಎಂದು ಕುಕೀಸ್ ಈ ಹಿಂದೆ ಘೋಷಿಸಿತ್ತು. ಕುಕಿ ನೇಷನ್ಸ್ ಅಸೆಂಬ್ಲಿ ಮತ್ತು ಕುಕಿ ಐಎನ್‌ಪಿಐ ಸಂಘಟನೆಗಳು ಚುನಾವಣೆಯಿಂದ ವಿಮುಖವಾಗಿವೆ ಮಣಿಪುರದಲ್ಲಿ ಏಪ್ರಿಲ್ 19 ಮತ್ತು 26 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ರಾಜ್ಯದಲ್ಲಿ ಈ ಬಾರಿ ಪೋಸ್ಟರ್, ಜಾಥಾ ಸದ್ದುಗದ್ದಲವಿಲ್ಲದ ಚುನಾವಣೆ ನ ಡೆಸಲು ಸೂಚಿಸಲಾಗಿದೆ.

ಪೂರ್ವ ಇಂಫಾಲ್ ಜಿಲ್ಲೆಯಲ್ಲಿ ಶನಿವಾರ ಎರಡು ಸಶಸ್ತ್ರ ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಶುಕ್ರವಾರ ತೆಂಗನೌಪಾಲ್ ಜಿಲ್ಲೆಯಲ್ಲಿ ಸಶಸ್ತ್ರ ಗುಂಪುಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಗಾಯಗೊಂಡಿದ್ದಾರೆ.

ಚೀನಾ ಮತ್ತು ಪಾಕಿಸ್ತಾನದ ಬೆದರಿಕೆಯನ್ನು ಎದುರಿಸಲು ಸಮರ್ಥವಾಗಿರುವ ಭಾರತೀಯ ಸೇನೆಯು ಮುಗ್ಧ ನಾಗರಿಕರನ್ನು ಭಯೋತ್ಪಾದಕರಿಂದ ರಕ್ಷಿಸುವಲ್ಲಿ ವಿಫಲವಾಗುತ್ತಿರುವುದು ಅತ್ಯಂತ ನಿರಾಶಾದಾಯಕವಾಗಿದೆ ಎಂದು ಕುಕಿ ರಾಷ್ಟ್ರೀಯ ಅಸೆಂಬ್ಲಿಯ ವಕ್ತಾರ ಮಾಂಗೆ ಬಾಯಿ ಹಾಕಿಪ್ ಹೇಳಿದ್ದಾರೆ.

ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆ ಯನ್ನೂ ಭಾರತದ ಸಂವಿಧಾನದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಕಾರಣವಾದೀತು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಸಮಾಧಾನವನ್ನು ಮುಖಂಡರಿಗೆ ತಿಳಿಸಲಾಗಿದೆ.

ಭಾರತೀಯ ನಾಯಕತ್ವದ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸಲು ತಾವು ಚುನಾವಣೆಯಿಂದ ದೂರವಿರಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ . ನಮ್ಮ ನೋವು ಮತ್ತು ಸಂಕಟಗಳನ್ನು ಜಗತ್ತಿಗೆ ತಿಳಿಸಲು ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಹಾಕಿಪ್ ಹೇಳಿದರು.

error: Content is protected !! Not allowed copy content from janadhvani.com