janadhvani

Kannada Online News Paper

ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ

ಧಾರ್ಮಿಕ ಕ್ಷೇತ್ರದಲ್ಲಿರುವವರನ್ನು ಪೋಷಕರು ತಾತ್ಸಾರವಾಗಿ ಕಾಣುವ ಪ್ರವೃತ್ತಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆಯಾಗಿದೆ.

ದ.ಕ.ಜಿಲ್ಲೆಯ ಮೊಹಲ್ಲಾವೊಂದರಲ್ಲಿ ಮದ್ರಸಾ ಅಧ್ಯಾಪಕರ ಮೇಲೆ ವ್ಯಕ್ತಯೋರ್ವನು ಹಲ್ಲೆ ಮಾಡಿ ಗದರಿಸಿರುವ ವೀಡಿಯೋ ವೈರಲಾಗುತ್ತಿದ್ದು, ಈ ಘಟನೆ ಆಘಾತಕಾರಿಯಾಗಿದೆ ಎಂದು ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಪ್ರಕಟನೆಯಲ್ಲಿ ತಿಳಿಸಿದೆ.

ಇಂತಹ ಘಟನೆಗಳು ಪುನರಾವರ್ತನೆಯಾಗದಿರಲು ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತಾಗಬೇಕು. ಹೊಸ ತಲೆಮಾರಿನ ಕೌಟುಂಬಿಕ ಹಾಗೂ ಸಾಮಾಜಿಕ ಜೀವನವು ಶಿಥಿಲಗೊಳ್ಳದಂತೆ ನೋಡಿಕೊಳ್ಳಲು ಧಾರ್ಮಿಕ-ನೈತಿಕ ಶಿಕ್ಷಣ ಅಗತ್ಯವಾಗಿದೆ. ಧಾರ್ಮಿಕ ಕ್ಷೇತ್ರದಲ್ಲಿರುವವರನ್ನು ಪೋಷಕರು ತಾತ್ಸಾರವಾಗಿ ಕಾಣುವ ಪ್ರವೃತ್ತಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆಯಾಗಿದೆ.

ಈ ಕುರಿತು ಸಂಬಂಧಪಟ್ಟ ಮೊಹಲ್ಲಾ ಆಡಳಿತ ಸಮಿತಿ ಸಕಾರಾತ್ಮಕ ನಿಲುವು ತಾಳಿಕೊಳ್ಳುವ ಆಶಾಭಾವನೆಯನ್ನು ಎಸ್‌ವೈಎಸ್ ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ...