janadhvani

Kannada Online News Paper

ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ

ಇದು ಇಡೀ ಶಿಕ್ಷಣ ವ್ಯವಸ್ಥೆ ಮತ್ತು ಸೌಹಾರ್ದಯುತ ಸಮಾಜಕ್ಕೆ ಬಗೆದ ದ್ರೋಹವಾಗಿದೆ

ಸುರತ್ಕಲ್: ಸಮಾಜಕ್ಕೆ ನೈತಿಕತೆಯ ಬೆಳಕನ್ನು ನೀಡುವ, ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಧಾರ್ಮಿಕ ಶಿಕ್ಷಣವನ್ನು ಧಾರೆ ಎರೆಯುವ ಮದ್ರಸಾ ಅಧ್ಯಾಪಕರ (ಮುಅಲ್ಲಿಮ್) ಮೇಲೆ ಕೃಷ್ಣಾಪುರದಲ್ಲಿ ನಡೆದಿರುವ ಹಲ್ಲೆಯ ದೌರ್ಜನ್ಯವು ಅತ್ಯಂತ ಆಘಾತಕಾರಿ ಮತ್ತು ಅಕ್ಷಮ್ಯ ಅಪರಾಧವಾಗಿದೆ. ಈ ನೀಚ ಕೃತ್ಯವನ್ನು SJM ಕಿನ್ನಿಗೋಳಿ ರೇಂಜ್ ಅತ್ಯಂತ ತೀವ್ರ ಪದಗಳಲ್ಲಿ ಖಂಡಿಸುತ್ತದೆ.

ಮದ್ರಸಾ ಅಧ್ಯಾಪಕರು ಸಮಾಜದಲ್ಲಿ ಅತ್ಯಂತ ಗೌರವಾನ್ವಿತ ಸ್ಥಾನದಲ್ಲಿದ್ದವರು. ಯಾವುದೇ ಸ್ವಾರ್ಥವಿಲ್ಲದೆ, ಕೇವಲ ಧಾರ್ಮಿಕ ಮತ್ತು ಸಾಮಾಜಿಕ ಬದ್ಧತೆಯಿಂದ ಕಿರಿಯ ತಲೆಮಾರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಗುರುಗಳ ಮೇಲೆ ಕೈಮಾಡಿರುವುದು ಕೇವಲ ಒಬ್ಬ ವ್ಯಕ್ತಿಯ ಮೇಲಿನ ಹಲ್ಲೆಯಲ್ಲ; ಇದು ಇಡೀ ಶಿಕ್ಷಣ ವ್ಯವಸ್ಥೆ ಮತ್ತು ಸೌಹಾರ್ದಯುತ ಸಮಾಜಕ್ಕೆ ಬಗೆದ ದ್ರೋಹವಾಗಿದೆ. ಇಂತಹ ಘಟನೆಗಳು ಸಮಾಜದ ಶಾಂತಿ ಮತ್ತು ನೆಮ್ಮದಿಯನ್ನು ಕದಡುವ ಯತ್ನಗಳಾಗಿವೆ.

SJM ಕಿನ್ನಿಗೋಳಿ ರೇಂಜ್ ಕಡಕ್ ಆಗ್ರಹ “ಜ್ಞಾನದ ಬೆಳಕನ್ನು ಹರಡುವ ಶಿಕ್ಷಕರ ಮೇಲೆ ಸಾರ್ವಜನಿಕವಾಗಿ ದೌರ್ಜನ್ಯ ನಡೆಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿ. ಕಾನೂನನ್ನು ಕೈಗೆತ್ತಿಕೊಂಡು ದರ್ಪ ತೋರಿದ ದುಷ್ಕರ್ಮಿಗಳು ಯಾರೇ ಆಗಿದ್ದರೂ, ಪೊಲೀಸರು ಮತ್ತು ಸಂಬಂಧಪಟ್ಟ ಕಾನೂನು ಪ್ರಾಧಿಕಾರಗಳು ತಕ್ಷಣವೇ ಅವರನ್ನು ಬಂಧಿಸಿ, ಕಠಿಣಾತಿಕಠಿಣ ಕಾನೂನು ಕ್ರಮ ಜರುಗಿಸಬೇಕು.”

ನೊಂದ ಅಧ್ಯಾಪಕರಿಗೆ ಹಾಗೂ ಕೃಷ್ಣಾಪುರದ ಮದ್ರಸಾ ಆಡಳಿತ ಮಂಡಳಿಗೆ SJM ಕಿನ್ನಿಗೋಳಿ ರೇಂಜ್ ಬೆಂಬಲವನ್ನು ಘೋಷಿಸುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಮತ್ತು ಶಿಕ್ಷಕ ಸಮುದಾಯಕ್ಕೆ ಸೂಕ್ತ ರಕ್ಷಣೆ ನೀಡಲು ಕಾನೂನು ಸುವ್ಯವಸ್ಥೆ ಕಾಪಾಡುವ ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಲಾಗಿದೆ.

ಇದನ್ನೂ ಓದಿರಿ...