janadhvani

Kannada Online News Paper

ಇಸ್ರೇಲ್‌ನ ಯುದ್ಧ ಅಪರಾಧಗಳ ವಿರುದ್ಧ ಅಂತಾರಾಷ್ಟ್ರೀಯ ತನಿಖೆ ತಕ್ಷಣ ಆರಂಭಿಸಬೇಕು- ಖತಾರ್

ಗಾಝಾದಲ್ಲಿ ಯುದ್ಧ ಅಪರಾಧಗಳಿಗೆ ಕಾರಣರಾದವರನ್ನು ಕಾನೂನಿನ ಮುಂದೆ ತರಲು ಮತ್ತು ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ತಕ್ಷಣವೇ ತನಿಖೆಯನ್ನು ಕೈಗೊಳ್ಳಬೇಕು

ದೋಹಾ: ಇಸ್ರೇಲ್‌ನ ಯುದ್ಧ ಅಪರಾಧಗಳ ವಿರುದ್ಧ ಅಂತಾರಾಷ್ಟ್ರೀಯ ತನಿಖೆಯನ್ನು ಕತಾರ್ ಬಯಸಿದೆ. ಜಿಸಿಸಿ ಶೃಂಗಸಭೆಗೂ ಮುನ್ನ ನಡೆದ ಸಚಿವರ ಸಭೆಯಲ್ಲಿ ಕತಾರ್ ಪ್ರಧಾನಿ ಈ ಕುರಿತು ಮನವಿ ಮಾಡಿದ್ದಾರೆ.

ಕತಾರ್‌ನ ಪ್ರಧಾನಿ ಶೈಖ್ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ ಅವರು ಗಾಝಾದಲ್ಲಿ ಇಸ್ರೇಲ್ ಆಕ್ರಮಣಕಾರಿ ಪಡೆಗಳು ನಡೆಸಿರುವ ಯುದ್ಧ ಅಪರಾಧಗಳನ್ನು ಬಲವಾಗಿ ಖಂಡಿಸಿದ್ದಾರೆ. ಗಾಝಾದಲ್ಲಿ ಯುದ್ಧ ಅಪರಾಧಗಳಿಗೆ ಕಾರಣರಾದವರನ್ನು ಕಾನೂನಿನ ಮುಂದೆ ತರಲು ಮತ್ತು ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ತಕ್ಷಣವೇ ತನಿಖೆಯನ್ನು ಕೈಗೊಳ್ಳಬೇಕು.

ದೋಹಾ ಜಿಸಿಸಿ ಶೃಂಗಸಭೆಗೆ ಮುನ್ನ ನಡೆದ ಸಚಿವರ ಸಿದ್ಧತಾ ಸಭೆಯಲ್ಲಿ ಕತಾರ್ ಶಾಶ್ವತ ಶಾಂತಿಯ ಉದ್ದೇಶದಿಂದ ಮಧ್ಯಸ್ಥಿಕೆ ಮಾತುಕತೆಯನ್ನು ಮುಂದುವರಿಸಲಿದೆ ಎಂದು ಹೇಳಿದರು. 1967 ರ ಗಡಿಗಳನ್ನು ಆಧರಿಸಿ ದ್ವಿರಾಷ್ಟ್ರ ಪರಿಹಾರದ ಅಗತ್ಯವನ್ನು ಕತಾರ್ ಪುನರುಚ್ಚರಿಸಿತು. ಸಭೆಯಲ್ಲಿ ಜಿಸಿಸಿ ದೇಶಗಳ ವಿದೇಶಾಂಗ ಸಚಿವರು ಭಾಗವಹಿಸಿದ್ದರು.

ಅದೇ ಸಮಯದಲ್ಲಿ, ಕತಾರ್ ಪ್ರಧಾನಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕನ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಗಾಝಾದಲ್ಲಿ ಕದನ ವಿರಾಮವನ್ನು ಮುಂದುವರಿಸಲು ಸಾಧ್ಯವಾಗದ ಸಂದರ್ಭಗಳನ್ನು ವಿವರಿಸಿದರು.

error: Content is protected !! Not allowed copy content from janadhvani.com