ಅಬುಧಾಬಿ: ಕಾರ್ಮಿಕರಿಗೆ ವೇತನ ನೀಡುವುದರಲ್ಲಿ ವಿಳಂಬ ಉಂಟುಮಾಡಿದ 164 ಕಂಪನಿಗಳ ವಿಚಾರಣೆಯನ್ನು ಪ್ರೋಸಿಕ್ಯೂಷನ್ಗೆ ವರ್ಗಾಯಿಸಲಾಗಿದೆ.
ಎರಡು ತಿಂಗಳುಗಳಿಗಿಂತ ಹೆಚ್ಚಿನ ಸಂಬಳವನ್ನು ಪಾವತಿಸದಿರುವ ಕಂಪನಿಗಳು ಕಾನೂನು ಕ್ರಮವನ್ನು ಎದುರಿಸುತ್ತಿವೆ.
ಮಾನವ ಸಂಪನ್ಮೂಲ ಸ್ವದೇಶೀಕರಣ ಸಚಿವಾಲಯದ ನೇತೃತ್ವದಲ್ಲಿರುವ ಮಾನವ ಕಳ್ಳಸಾಗಣೆಗಳ ರಕ್ಷಣಾ ಸಮಿತಿಯ ವಾರ್ಷಿಕ ವರದಿಯಲ್ಲಿ, ಸಂಬಳ ಪಾವತಿಸಲು ವಿಫಲವಾದ ಸಂಸ್ಥೆಗಳಿಗೆ ಸಂಬಧಪಟ್ಟ ಕಡತಗಳನ್ನು ಪ್ರೋಸಿಕ್ಯೂಷನ್ಗೆ ಹಸ್ತಾಂತರಿಸಿದ ವಿವರಗಳಿವೆ.
ವೇತನ ಲಭಿಸದೆ ಸಂಕಷ್ಟಕ್ಕೀಡಾದ ಕಾರ್ಮಿಕರನ್ನು ತಾಯ್ನಾಡಿಗೆ ಕಳುಹಿಸುವುದು ಸಮೇತ ಕಾರ್ಯಗಳನ್ನು ಕ್ರಮೀಕರಿಸಲು ಸಮಿತಿಯು ಕಳೆದ ವರ್ಷ ಒಟ್ಟು 2.7 ಮಿಲಿಯನ್ ದಿರ್ಹಮ್ ಗಳನ್ನು ವ್ಯಯಿಸಿದೆ ಎಂದು ಸಮಿತಿಯು ಹೇಳಿದೆ.ಉದ್ಯೋಗದಾತ ವೀಸಾ ಅರ್ಜಿಗಳನ್ನು ನೀಡಿದಾಗ ಪಾವತಿಸಿದ ಮೊತ್ತವನ್ನು ಈ ಕಾರ್ಯಕ್ಕಾಗಿ ವ್ಯಯಿಸಲಾಗಿದೆ.
ಯುಎಇ ಕಾಯಿದೆ ಪ್ರಕಾರ ಕಾರ್ಮಿಕರಿಗೆ 2 ತಿಂಗಳುಗಳಿಗಿಂದ ವೇತನ ವಿಳಂಬ ಗೊಳಿಸುವುದು ಕಾನೂನು ಬಾಹಿರವಾಗಿದೆ.ಎರಡು ತಿಂಗಳ ವೇತನವನ್ನು ಪಡೆಯದ ನೌಕರರು ಪ್ರಾಯೋಜಕರ ಒಪ್ಪಿಗೆಯಿಲ್ಲದೆ ಇತರ ಸೂಕ್ತ ಸಂಸ್ಥೆಗಳಿಗೆ ವೀಸಾವನ್ನು ಬದಲಾಯಿಸಲು ಅನುಮತಿಯಿದೆ.
ಖಾಸಗಿ ವಲಯದ ಕಾರ್ಮಿಕರ ಸ್ಥಿತಿಯನ್ನು ಸುಧಾರಿಸಲು 50,000ಕ್ಕಿಂತ ಹೆಚ್ಚಿನ ಪರಿಶೀಲನೆಗಳನ್ನು ಕಳೆದ ವರ್ಷ ನಡೆಸಲಾಗಿದೆ.
ಮಾನವ ಕಳ್ಳಸಾಗಣೆ ತಡೆಯುವ ಸಲುವಾಗಿ 2013 ರಲ್ಲಿ ಯುಎಇ ರಾಷ್ಟ್ರೀಯ ಸಮಿತಿಯನ್ನು ರಚಿಸಲಾಯ್ತು. ಸಂತ್ರಸ್ತರಿಗೆ ಸಹಾಯ ಮತ್ತು ಪುನರ್ವಸತಿಗಾಗಿ 663,206 ದಿರ್ಹಂ ಖರ್ಚು ಮಾಡಲಾಯಿತು.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು