ಅಬುಧಾಬಿ: ರಮಝಾನ್ನಲ್ಲಿ ಸ್ವಯಂ ಆತ್ಮಪರಿಶೀಲನೆ ನಡೆಸಿ ಮನಸ್ಸನ್ನು ನಲ್ಮೆಯ ಫಲವತ್ತಾದ ಭೂಮಿಯನ್ನಾಗಿ ಮಾಡುವಂತೆ, ಎಸ್ಸೆಸ್ಸೆಫ್ ಕೇರಳ ರಾಜ್ಯಾಧ್ಯಕ್ಷ, ಶೈಖ್ ಖಲೀಫಾ ಬಿನ್ ಝಾಯಿದ್ ಅಲ್ ನಹ್ಯಾನ್ ಅವರ ರಮಝಾನ್ ಅತಿಥಿಯೂ ಆಗಿರುವ ಪ್ರಮುಖ ವಾಗ್ಮಿ ಡಾ. ಫಾರೂಖ್ ನಈಮಿ ಕೊಲ್ಲಂ ಹೇಳಿದ್ದಾರೆ.
ಅಬುಧಾಬಿಯ ಇಂಡಿಯನ್ ಇಸ್ಲಾಮಿಕ್ ಸೆಂಟರ್ನಲ್ಲಿ ಅವರು ರಮಝಾನ್ ಪ್ರವಚನ ನೀಡುತ್ತಿದ್ದರು.
ಪಾಪಗಳನ್ನು ಮನ್ನಿಸಲ್ಪಡುವ ರಮಝಾನಿನಲ್ಲಿ ದಾನ ಮತ್ತು ಕುರ್ಆನ್ ಪಾರಾಯಣವನ್ನು ಹೆಚ್ಚಿಸುವಂತಾಗ ಬೇಕು. ರಂಝಾನ್ ನ ಬಿಡುವಿನ ವೇಳೆಗಳು ನಿದ್ರಿಸಲು ಮೀಸಲಿರುವ ಸಮಯವಲ್ಲ. ವೃತ ಅನುಷ್ಟಿಸುವವರ ನಿದ್ರೆ ಕೂಡ ಆರಾಧನೆಯಾಗಿದೆ. ಹಾಗೆ ಮಾಡುವುದರಿಂದ ಭೂಮಿ ಸಣ್ಣದಾಗಿ, ಪರಲೋಕಕ್ಕಿರುವ ದೂರ ಕಡಿಮೆಯಾಗುತ್ತದೆ ಎಂದು ಅವರು ಹೇಳಿದರು. ಅಲ್ಲಾಹನ ಕಾರುಣ್ಯ ಗೃಹವಾದ ಸ್ವರ್ಗದ ಕುರಿತು ನಾವು ತಿಳಿಯಬೇಕು.ಸ್ವರ್ಗವು ವೃತ ಅನುಷ್ಟಿಸುವವರ ಮನೆಯಾಗಿದೆ. ಅಲ್ಲಾಹನತ್ತ ಇನ್ನಷ್ಟು ಹತ್ತಿರವಾಗಲು ಪ್ರಚೋದನೆ ನೀಡುವ ಮಾಸವಾಗಿದೆ ರಮಝಾನ್. ಇತರ ದಿನಗಳಿಗಿಂದ ದುಪ್ಪಟ್ಟು ಪ್ರತಿಫಲ ಲಭಿಸುವ ಮಾಸವಾಗಿದೆ ರಮಝಾನ್ ಎಂದು ಅವರು ವಿವರಿಸಿದರು.
ಐಸಿಎಫ್ ರಾಷ್ಟ್ರಾಧ್ಯಕ್ಷ ಮುಸ್ತಫಾ ದಾರಿಮಿ ಕಡಾಂಗೋಡ್ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ. ಅಬೂಬಕರ್ ಮೌಲವಿ, ಹಂಝ ಅಹ್ಸನಿ, ಹಮೀದ್ ಪರಪ್ಪ ಹಮೀದ್ ಈಶ್ವರಮಂಗಲ, ಅನ್ವರ್ ಸಾದಾತ್ ತಂಙಳ್ ವಾರಾಣಕ್ಕರ, ಸಮದ್ ಅಮಾನಿ ಮುಂತಾದವರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ