janadhvani

Kannada Online News Paper

ಬೆಂಗಳೂರು : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಜಯನಗರ ಡಿವಿಷನ್ ಇದರ ವಾರ್ಷೀಕ ಮಹಾಸಭೆಯು ಶೇವೆರಿ ಶೀಶಲ್ ಹೋಟೆಲ್ ಮಡಿವಾಳ ದಲ್ಲಿ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಉಮೈದಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರಗಿತು.

Sys ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಪಯೋಟ ಉದ್ಘಾಟನೆಯನ್ನು ನೆರವೇರಿಸಿದರು.
ಡಿವಿಷನ್ ಪ್ರಧಾನ ಕಾರ್ಯದರ್ಶಿ ಸಂಶುದ್ದೀನ್ ರವರು ವಾರ್ಷಿಕ ವರದಿಯನ್ನೂ, ಹನೀಫ್ ಸ ಅದಿ Qd & Cc ವರದಿಯನ್ನು, ವಾಜಿದ್ ಅಂಜದಿ ರೈಂಬೋ ವರದಿಯನ್ನೂ, ಅಝ್ಅರ್ ಕ್ಯಾಂಪಸ್ ವರದಿಯನ್ನು,ಅಬ್ದುಲ್ ರವೂಫ್ ಮೀಡಿಯಾ ಮತ್ತು ಪಬ್ಲಿಕೇಶನ್ ವರದಿ ವಾಚಿಸಿದರು. ಲೆಕ್ಕಪತ್ರ ವನ್ನು ಕೋಶಾಧಿಕಾರಿ ಮುಸ್ತಾಕ್ ಅಹ್ಮದ್ ರವರು ಮಂಡಿಸಿದರು.

ನಿರೀಕ್ಷಕರಾಗಿ ಆಗಮಿಸಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಬೀಬ್ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ ವಾಜಿದ್ ಅಂಜದಿ ಉಸ್ತಾದ್ ಪ್ರಧಾನ ಕಾರ್ಯದರ್ಶಿ ಯಾಗಿ ಮುಸ್ತಾಕ್ ಅಹ್ಮದ್ ಕೋಶಾಧಿಕಾರಿಯಾಗಿ ಅಝ್ಅರ್ ,ದವಾ ಕಾರ್ಯದರ್ಶಿಯಾಗಿ ಸಲೀಂ ನಹೀಮಿ, ಕ್ಯಾಂಪಸ್ ಮತ್ತು ವಿಸ್ಡಂ ಕಾರ್ಯದರ್ಶಿ ಯಾಗಿ ಜುನೈದ್ ಮುಸ್ಲಿಯಾರ್, QD ಕಾರ್ಯದರ್ಶಿಯಾಗಿ ಪೈಝಲ್ ರಹ್ಮಾನ್ , ರೈನ್ಬೋ ಕಾರ್ಯದರ್ಶಿಯಾಗಿ ಮುಹಮ್ಮದ್ ಅಹ್ಸನಿ,GD ಕಾರ್ಯದರ್ಶಿಯಾಗಿ ಅಬ್ದುಲ್ ರವೂಫ್, ಮೀಡಿಯಾ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಸಿದ್ದೀಕ್.

1
1
1

error: Content is protected !! Not allowed copy content from janadhvani.com