janadhvani

Kannada Online News Paper

1

ಜುಬೈಲ್: ಸಅದಿಯ ನೂತನ ಉಮ್ರಾ ಸರ್ವಿಸ್ ಲೋಕಾರ್ಪಣೆ

ಜುಬೈಲ್,ಫೆ.21: ಸಅದಿಯ ನೂತನ ಉಮ್ರಾ ಸರ್ವಿಸ್ ಆಫೀಸ್ ಇಂದು ಜುಬೈಲ್ ನಲ್ಲಿ ಲೋಕಾರ್ಪಣೆ ಗೊಂಡಿತು.
ಸಯ್ಯಿದ್ ಆಟಕೋಯ ಪಂಜಿಕಲ್ ತಂಙಳ್ ನೂತನ ಕೊಠಡಿಯನ್ನು ಉದ್ಘಾಟಿಸಿ, ದುವಾ ನಡೆಸಿ ಶುಭ ಹಾರೈಸಿದರು.

ಈ ವೇಳೆ ಕೊಲ್ಲಂಬಾಡಿ ಅಬ್ದುಲ್ ಖಾದರ್ ಸಅದಿ ಅವರು ಮಾತನಾಡಿ, ಉಮ್ರಾ ಅಲ್ಲದೆ, ಎಲ್ಲಾ ಕ್ಷೇತ್ರಗಳಲ್ಲಿ ಜುಬೈಲ್ ಸಅದಿಯಾ ಕಾರ್ಯಪ್ರವೃತವಾಗಿದ್ದು, ಇದೀಗ ಪವಿತ್ರ ಉಮ್ರಾ ಕ್ಷೇತ್ರದಲ್ಲೂ ತನ್ನ ಹೆಜೆಯನ್ನಿಟ್ಟಿರುವುದು ಸಂತಸವಾಗಿದೆ.

ಅನಾಥ ಅತಿಥಿಗಳಿಗೆ ಸಂರಕ್ಷಣೆ ನೀಡುತ್ತಿರುವ ಸಂಸ್ಥೆಗೆ ಬೇಕಾಗಿ ಎಲ್ಲರೂ ಕೈ ಜೋಡಿಸಿ, ಸಂಸ್ಥೆಯ ಉನ್ನತಿಗೆ ಶ್ರಮಿಸಬೇಕೆಂದು ಕರೆ ನೀಡಿದರು. ಬಳಿಕ ಅಲ್ ಫಲಾಹ್ ನಝೀರ್ ಹಾಗೂ ಯೂಸುಫ್ ಸಅದಿ ಅವರು ಸಅದಿಯಾ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸಯ್ಯಿದ್ ಶುಕೂರ್ ತಂಙಳ್, ಅಬ್ದುಲ್ ರಹ್ಮಾನ್ ಮದನಿ, ಹಬೀಬ್ ಸಖಾಫಿ, ಮುಹಮ್ಮದ್ ಸಅದಿ, ಅಬ್ದುಲ್ ಖಾದರ್ ಸಅದಿ, ಮೂಸ ಹಾಜಿ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.

1
1
1

error: Content is protected !! Not allowed copy content from janadhvani.com