ದೋಹಾ: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಖತ್ತರ್ ನೂತನ ರಾಷ್ಟ್ರೀಯ ಸಮಿತಿಯನ್ನು ರಯ್ಯಾನ್ ಸಭಾಂಗಣದಲ್ಲಿ ಅಬ್ಬಾಸ್ ಸಖಾಫಿ ಬಲಮುರಿ’ಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಮಹಾ ಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಯೂಸಫ್ ಸಖಾಫಿ ಅಯ್ಯಂಗೇರಿ ಯವರು ಸಭೆಯನ್ನು ಉದ್ಘಾಟಿಸಿದರು. ಹಾಫೀಳ್ ಉಮರುಲ್ ಫಾರೂಖ್ ಸಖಾಫಿ ಹೊಸ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ನೇತ್ರತ್ವ ವಹಿಸಿದರು.
🔽ನೂತನ ಸಾರಥಿಗಳು🔽
ಸಲಹಾ ಸಮಿತಿ ಚೆಯರ್ಮೇನ್: ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಅಧ್ಯಕ್ಷರು: ಯುಸುಫ್ ಸಖಾಫಿ (ಅಯ್ಯಂಗೇರಿ) ಉಪಾದ್ಯಕ್ಷರು: ಜಾಬಿರ್ (ಪಡಿಯಾಣಿ)
ಪ್ರಧಾನ ಕಾರ್ಯದರ್ಶಿ: ಶಫೀಕ್ (ತಾವೂರು) ಕಾರ್ಯದರ್ಶಿ: ಅಝರ್ (ಕೊಂಡಂಗೇರಿ) ಕೋಶಾಧಿಕಾರಿ: ಯಹ್ಯಾ ಸಅದಿ (ಕಡಂಗ)
ಶಿಕ್ಷಣವಿಭಾಗ ಅಧ್ಯಕ್ಷರು: ಅಬ್ಬಾಸ್ ಸಖಾಫಿ (ಬಲಮುರಿ)
ಕೋರ್ಡಿನೇಟರ್:ನಝೀರ್(ಮೂರ್ನಾಡ್)
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ, ಅಲಿ ಕೊಡಗು, ಹಾರಿಸ್ ಎಡಪಲ, ಅಝೀಝ್ ಹುಂಡಿ,
ಸಿದ್ದೀಕ್ ಪಡಿಯಾನಿ, ಉಫೈಜ್ ಕಡಂಗ ಮುಂತಾದವರನ್ನು ಆಯ್ಕೆ ಮಾಡಲಾಯಿತು.
ಮುಖ್ಯ ಭಾಷಣ ಮಾಡಿದ ಹಾಫಿಲ್ ಉಮರುಲ್ ಫಾರೂಖ್ ಸಖಾಫಿ “ಕೊಡಗು ಜಿಲ್ಲೆಯಲ್ಲಿ ಸಾಂತ್ವನ ಚಟುವಟಿಕೆಗಳ ಆವಶ್ಯಕತೆಯ ಕುರಿತು ಸವಿಸ್ತಾರವಾಗಿ ವಿವರಿಸಿದರು. ಸಭಿಕರನ್ನು ಶಫೀಕ್ ತಾವೂರು ಸ್ವಾಗತಿಸಿ ನಝೀರ್ ಮೂರ್ನಾಡು ವಂದಿಸಿದರು.