janadhvani

Kannada Online News Paper

ಬರೆಪ್ಪಾಡಿ ಕುದ್ಮಾರು: ಅಲ್ ಹೈದ್ರೂಸಿಯ ಮದ್ರಸ ವಿಧ್ಯಾರ್ಥಿಗಳ ಸಂಘಟನೆ ಎಸ್.ಬಿ.ಎಸ್ ನ ಸಾರಥಿಗಳು

ಪುತ್ತೂರು: ಬರೆಪ್ಪಾಡಿ ಕುದ್ಮಾರು ಅಲ್ ಫಝಲ್ ಜುಮ್ಮಾ ಮಸೀದಿ ಕೂರತ್ ಇದರ ಅಧೀನಕ್ಕೂಳಪಟ್ಟ ಸೆಯ್ಯೆದ್ ಖುರ್ರತುಸ್ಸಾದತ್ ಕೂರತ್ ತಂಙಳ್ ರವರ ನೇತೃತ್ವದಲ್ಲಿ ನಡೆಯುತ್ತಿರುವ ಅಲ್ ಹೈದ್ರೂಸಿಯ ಮದ್ರಸ ವಿಧ್ಯಾರ್ಥಿಗಳ ಸಂಘಟನೆಯಾದ ಸುನ್ನೀ ಬಾಲ ಸಂಘ S.B.S ಇದರ 22-23ನೇ ಸಾಲಿನ ನೂತನ ಸಮಿತಿಯ ಆಯ್ಕೆಯು ಜುಲೈ 31 ರಂದು ನಡೆಯಿತು.

ಮದ್ರಸ ಸಭಾಂಗಣದಲ್ಲಿ ನಡೆದ ಪ್ರಸ್ತುತ ಕಾರ್ಯಕ್ರಮದಲ್ಲಿ ನಿನ್ನೆ ನಮ್ಮನಗಲಿದ ಯುವ ಭಾಷಣಗಾರರು, ಕಣ್ಣೂರು ಜಿಲ್ಲಾ ಮುಸ್ಲಿಂ ಜಮಾಅತ್ ಉಪಾಧ್ಯಕ್ಷರು ಅಗಿದ್ದ ಅಬ್ದುಲ್ ಲತ್ವೀಫ್ ಪಯಶ್ವಿ ಉಸ್ತಾದರ ಅನುಸ್ಮರಣೆ ಹಾಗೂ ದುಆ ಮಜ್ಲಿಸ್ ನಡೆಸಲಾಯಿತು.

ಮುಖ್ಯೋಪಾಧ್ಯಾಯರಾದ ಸಿರಾಜುದ್ದೀನ್ ಹಿಮಮಿಯವರ ಅಧ್ಯಕ್ಷತೆಯಲ್ಲಿ ಮುದಬ್ಬಿರ್ ಅನ್ಸಾರ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಲತೀಪ್ ಮುಸ್ಲಿಯಾರ್ ಶುಭಕೋರಿ ಮಾತನಾಡಿದರು.

ಎಸ್. ಬಿ. ಎಸ್ ನ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಸುಹೈಬ್, ಉಪಾಧ್ಯಕ್ಷರು ಮುಖ್ತಾರ್, ಪ್ರ.ಕಾರ್ಯದರ್ಶಿ ಮುಹಮ್ಮದ್ ಜುನೈದ್, ಪೈನಾನ್ಸ್ ಸೆಕ್ರೆಟರಿ ಫಝಲ್, ಜೊತೆ ಕಾರ್ಯದರ್ಶಿ ಅನ್ಸೀಫ್ ಇವರನ್ನು ಆಯ್ಕೆ ಮಾಡಲಾಯಿತು.

error: Content is protected !! Not allowed copy content from janadhvani.com