ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೌದಿ ಅರೇಬಿಯಾ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಜ್ಜ್ ವೋಲೆಂಟರ್ ಕೋರ್ (HVC) ತಂಡವು ಹಜ್ಜಾಜ್ ಗಳ ಸೇವೆ ಮಾಡಲು ಕಣಕ್ಕಿಳಿದರೆ ಇತರರಿಗಿಂತ ಒಂದು ಹೆಜ್ಜೆ ಮುಂಚೂಣಿಯಲ್ಲಿರುತ್ತಾರೆ.

ಕಳೆದ ಎರಡು ವರ್ಷಗಳು ಕೋವಿಡ್ ಕಾರಣದಿಂದಾಗಿ ಹಜ್ಜಾಜ್ ಗಳ ಸೇವೆ ಮಾಡಲು ಅವಕಾಶವಿರಲಿಲ್ಲ. ಆದರೆ ಈ ವರ್ಷ ಸೀಮಿತವಾದ ಕೆಲವು ಮಂದಿಗೆ ಅವಕಾಶ ಸಿಕ್ಕಿದ್ದು, ಅದರಂತೆ ಹೆಚ್ ವಿ ಸಿ ಚೇರ್ಮಾನ್ ಹಂಝಾ ಮೈಂದಾಳ, ಕನ್ವೀನರ್ ಇಬ್ರಾಹಿಮ್ ಕಿನ್ಯಾ, ಮಕ್ಕಾ ಕ್ಯಾಪ್ಟನ್ ಮೂಸಾ ಹಾಜಿ ಕಿನ್ಯಾ ಹಾಗೂ ಮದೀನಾ ಕ್ಯಾಪ್ಟನ್ ರಝ್ಝಾಕ್ ಉಳ್ಳಾಲರವರ ನೇತ್ರತ್ವದಲ್ಲಿ ಕೆಸಿಎಫ್ ಹೆಚ್ ವಿ ಸಿ 2022 ತಂಡವು ಕಾರ್ಯಾಚರಿಸುತ್ತಿದೆ.
ಜೂನ್ 04ರಂದು ಪವಿತ್ರ ಮದೀನಾಕ್ಕೆ ಭಾರತದಿಂದ ಆಗಮಿಸಿದ ಮೊದಲ ಹಜ್ಜಾಜ್ ಗಳ ತಂಡವನ್ನು ಸ್ವೀಕರಿಸುವ ಮೂಲಕ 2022ರ ಕೆಸಿಎಫ್ ತಂಡವು ತಮ್ಮ ಸೇವೆಯನ್ನು ಆರಂಭಿಸಿದ್ದಾರೆ. ಈ ಸೇವೆಯು ಭಾರತದ ಕೊನೆಯ ಹಜ್ಜಾಜ್ ಗಳ ತಂಡ ಸೌದಿ ಅರೇಬಿಯಾದಿಂದ ಹಿಂತಿರುಗುವ ವರೆಗೆ ಮುಂದುವರಿಯಲಿದೆ.
ಇನ್ನು ಪವಿತ್ರ ಹಜ್ಜ್ ಕರ್ಮದ ಮರ್ಮ ಭಾಗವಾದ ಅರಫಾ, ಮುಝ್ದಲಿಫಾ, ಮಿನಾ ಹಾಗೂ ಜಮ್ರಾತ್ ನಲ್ಲಿ ಸೇವೆ ಮಾಡಲು ಬೇಕಾಗಿ ಭಾರತದ ರಾಯಭಾರಿಯಿಂದ ಅನುಮತಿ ಸಿಕ್ಕ ಸ್ವಯಂಸೇವಕರು ಈಗಾಗಲೇ ಎಲ್ಲಾ ರೀತಿಯ ತಯಾರಿಯಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿರುತ್ತದೆ.
ಮಿನಾದಿಂದ ಹಜ್ಜಾಜ್ ಗಳು ಪವಿತ್ರ ಮಕ್ಕಾದ ಅಝೀಝಿಯ್ಯಾ ತಲುಪುವಾಗ ಅಲ್ಲಿಯೂ ಕೆಸಿಎಫ್ ತಂಡ ಹಜ್ಜಾಜ್ ಗಳ ಸೇವೆಗೆ ಸನ್ನದ್ದರಾಗಿರುತ್ತಾರೆ.
ವಿಶ್ವದ ನಾನಾ ಕಡೆಗಳಲ್ಲಿ ಮುಸ್ಲಿಮರು ಈದ್ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಿರುವಾಗ ಕೆಸಿಎಫ್ ಹೆಚ್ ವಿ ಸಿ ತಂಡವು ಅಲ್ಲಾಹನ ಅತಿಥಿಗಳಿಗೆ ಸೇವೆ ಮಾಡುವ ಮೂಲಕ ಅವರ ಈದ್ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಇವರ ಸೇವೆಯನ್ನು ಮೆಚ್ಚಿ ಈ ಮೊದಲು ಕಾರ್ಯಾಚರಿಸಿದ ಎಲ್ಲಾ ವರ್ಷಗಳಲ್ಲಿಯೂ ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯಿಂದ ಅಭಿನಂದನಾ ಪತ್ರವೂ ದೊರಕಿದೆ.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಸೌದಿ ಅರೇಬಿಯಾ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ರಕ್ಷಣಾ ಪಡೆಯಿಂದ ಯಶಸ್ವಿ ಪ್ರತಿರೋಧ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಉಮ್ರಾ ಯಾತ್ರಿಕರು ಏಪ್ರಿಲ್ 18 ರೊಳಗೆ ದೇಶ ತೊರೆಯಬೇಕು- ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಎಚ್ಚರಿಕೆ
ಭಾರೀ ಮಳೆ: ರಿಯಾದ್ ಸೇರಿದಂತೆ ಮೂರು ಪ್ರಾಂತ್ಯಗಳಲ್ಲಿ ‘ರೆಡ್ ಅಲರ್ಟ್’ ಘೋಷಣೆ
ಸೌದಿ ಅರೇಬಿಯಾ ಮೇಲೆ ಭಾರಿ ಕ್ಷಿಪಣಿ ದಾಳಿ- ರಿಯಾದ್ನಲ್ಲಿ ನಾಲ್ವರು ಏಷ್ಯನ್ ಅನಿವಾಸಿಗಳಿಗೆ ಗಾಯ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ನಿಷೇಧ- ಸೌದಿ ಆರೋಗ್ಯ ಸಚಿವಾಲಯದ ಎಚ್ಚರಿಕೆ
ಆನ್ಲೈನ್ ಶಾಪಿಂಗ್: ಸುರಕ್ಷಿತವಾಗಿರಲು ಸೌದಿ ಸೈಬರ್ ಭದ್ರತಾ ಪ್ರಾಧಿಕಾರದ ಮಹತ್ವದ ಸೂಚನೆಗಳು
ರಂಜಾನ್ ತಿಂಗಳಲ್ಲಿ 3.6 ಲಕ್ಷ ಉಮ್ರಾ ಯಾತ್ರಿಕರಿಗೆ ಉಚಿತ (ತಹಲ್ಲುಲ್) ಕ್ಷೌರ ಸೇವೆ