ನವದೆಹಲಿ: ವಿಶ್ವ ಪ್ರವಾದಿ ಕುರಿತು ಕೀಳು ಮಟ್ಟದ ಹೇಳಿಕೆ ನೀಡಿ ದೇಶದಲ್ಲಿ ಸಾಮರಸ್ಯವನ್ನು ಕೆಡವಲು ಕಾರಣರಾದವರ ವಿರುದ್ಧ ಪ್ರತಿಭಟಿಸಿದವರನ್ನು ಗುರಿಯಾಗಿಸಿ ಪ್ರತೀಕಾರ ತೀರಿಸಲು ಬುಲ್ಲೊಜರ್ ಬಳಸುತ್ತಿರುವ ಉತ್ತರ ಪ್ರದೇಶದ ಯೋಗಿ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
ಆಡಳಿತಾರೂಢ ಬಿಜೆಪಿಯ ಸದಸ್ಯರು ಪ್ರವಾದಿ ಮುಹಮ್ಮದ್ ಅವರ ವಿರುದ್ಧದ ವಿವಾದಾತ್ಮಕ ಹೇಳಿಕೆಗಳನ್ನು ಪ್ರತಿಭಟಿಸಿದವರನ್ನು ಗುರಿಯಾಗಿಸಿ ಉತ್ತರ ಪ್ರದೇಶ ಸರ್ಕಾರ ಬುಲ್ಡೋಜರ್ಗಳನ್ನು ಬಳಸುತ್ತಿದೆ ಎಂಬ ಆರೋಪದ ನಡುವೆ, ಸುಪ್ರೀಂ ಕೋರ್ಟ್ ಇಂದು ಕಠೋರವಾಗಿ, “ಕಾನೂನು ಪ್ರಕಾರವೇ ನೆಲಸಮವಾಗಬೇಕು, ಅವು ಪ್ರತೀಕಾರವಾಗಿರಬಾರದು” ಎಂದು ಹೇಳಿದೆ.
ಮಂಗಳವಾರ ನಡೆಯಲಿರುವ ಮುಂದಿನ ವಿಚಾರಣೆಗೆ ಮುನ್ನ ನೋಟಿಸ್ಗೆ ಉತ್ತರ ನೀಡುವಂತೆ ಯುಪಿ ಸರ್ಕಾರ ಮತ್ತು ಪ್ರಯಾಗ್ರಾಜ್ ಮತ್ತು ಕಾನ್ಪುರದ ನಾಗರಿಕ ಅಧಿಕಾರಿಗಳಿಗೆ ತಿಳಿಸಲಾಗಿದೆ.
“ಎಲ್ಲವೂ ನ್ಯಾಯಯುತವಾಗಿ ಕಾಣಬೇಕು… ಅಧಿಕಾರಿಗಳು ಕಾನೂನಿನ ಪ್ರಕಾರ ಮಾತ್ರ ಕಾರ್ಯನಿರ್ವಹಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಿ” ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಯುಪಿಯಲ್ಲಿನ “ಕಾನೂನುಬಾಹಿರ ಧ್ವಂಸಗಳನ್ನು” ನಿಲ್ಲಿಸುವಂತೆ ನ್ಯಾಯಾಲಯವನ್ನು ಕೋರಿದ ಅರ್ಜಿದಾರರಿಗೆ ಉತ್ತರಿಸಿದ ನ್ಯಾಯಾಧೀಶರು, “ನಾವು ನೆಲಸಮವನ್ನು ತಡೆಹಿಡಿಯಲು ಸಾಧ್ಯವಿಲ್ಲ. ನಾವು ಕಾನೂನಿಗೆ ಅನುಗುಣವಾಗಿ ಹೋಗುತ್ತೇವೆ” ಎಂದು ಹೇಳುವ ಮೂಲಕ ಬುಲ್ಡೋಜರ್ ಕಾರ್ಯಾಚರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನೆಲಸಮಗಳು “ಆಘಾತಕಾರಿ ಮತ್ತು ಭಯಾನಕ” ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್ಗೆ ತಿಳಿಸಿದರು, ಮನೆಗಳನ್ನು ನೆಲಸಮಗೊಳಿಸಿದ ನಂತರವಷ್ಟೇ ನೋಟಿಸ್ಗಳನ್ನು ನೀಡಲಾಗಿದೆ ಎಂದು ಆರೋಪಿಸಿದರು.
“ಸಮರ್ಪಕ ನೋಟಿಸ್ಗಳು ಕಡ್ಡಾಯವಾಗಿದೆ. ಈಗ ನಡೆಸುತ್ತಿರುವ ಕಾರ್ಯಾಚರಣೆಯು ಅಸಾಂವಿಧಾನಿಕ ಮತ್ತು ಆಘಾತಕಾರಿಯಾಗಿದೆ. ಇದು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಯಾಗಿದೆ” ಎಂದು ಅರ್ಜಿದಾರರ ಪರ ವಕೀಲ ಸಿಯು ಸಿಂಗ್ ಹೇಳಿದರು. ಯಾವುದೇ ಅನಧಿಕೃತ ಕಟ್ಟಡಗಳ ಧ್ವಂಸ ಕಾರ್ಯಾಚರಣೆ ಮೊದಲು ಕನಿಷ್ಠ 15 ರಿಂದ 40 ದಿನಗಳ ಮುಂಚಿತವಾಗಿ ಸೂಚನೆ ನೀಡಬೇಕು ಎಂದು ಅವರು ಹೇಳಿದರು.
ಅನಧಿಕೃತ ಕಟ್ಟಡಗಳ ತೆರವಿಗೆ ತಡೆ ನೀಡಲು ಸಾಧ್ಯವಿಲ್ಲ. ಆದರೆ ತೆರವಿಗೆ ಮುನ್ನ ಕಟ್ಟಡಗಳ ದಾಖಲೆಗಳನ್ನು ಪರಿಶೀಲಿಸಬೇಕು. ಕಾನೂನಿನ ಅನುಸಾರವಾಗಿ ಕ್ರಮಕೈಗೊಳ್ಳುವಂತೆ ಸೂಚಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಟ್ಟಡದ ಅನಧಿಕೃತ, ಅಧಿಕೃತದ ಬಗ್ಗೆ ಖಚಿತಪಡಿಸಿಕೊಳ್ಳಲು ಕೋರ್ಟ್ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಪ್ರಯಾಗ್ರಾಜ್ನಲ್ಲಿ ಕಳೆದ ಶುಕ್ರವಾರ ನಡೆದ ಹಿಂಸಾಚಾರದ ಮಾಸ್ಟರ್ಮೈಂಡ್ ಎಂದು ಪೊಲೀಸರು ಆರೋಪಿಸಿರುವ ರಾಜಕಾರಣಿ ಜಾವೇದ್ ಮೊಹಮ್ಮದ್ ಅವರ ಕುಟುಂಬಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆಯು ಅಲ್ಪ ಭರವಸೆ ಮೂಡಿಸಿದೆ. ಭಾನುವಾರ ಅವರ ಬಂಗಲೆಯನ್ನು ಧ್ವಂಸಗೊಳಿಸಲಾಗಿತ್ತು.
ಮಹತ್ವದ ವಿಷಯವೆಂದರೆ ಆ ಮನೆಯೂ ತನಗೆ ಸೇರಿದ್ದಲ್ಲ, ಸಂಪೂರ್ಣ ಮಾಲೀಕತ್ವ ಹೆಂಡತಿಯದ್ದಾಗಿತ್ತು. ಹೆಂಡತಿಯ ಮನೆಯನ್ನು ಹೇಗೆ ಕೆಳಗಿಳಿಸಿದ್ದೀರಿ? ಹೆಂಡತಿ ಮತ್ತು ಇತರ ಕುಟುಂಬ ಸದಸ್ಯರು ಈಗ ನಿರಾಶ್ರಿತರಾಗಿದ್ದಾರೆ ಎಂದು ಅವರ ವಕೀಲ ಕೆಕೆ ರೈ ಹೇಳಿದರು.
ಚೈನ ದ ಶತ್ರುಗಳಿಗೆ..ಮನೆ ನಿರ್ಮಾಣ ಮಾಡಲು..ಬಾರತೀಯರ ಹ್ರದಯದ ಭಾಗವಾದ..ಜಮೀನನ್ನು ಕಬಳಿಸಿ ಗ್ರಾಮವನ್ನೇ ನಿರ್ಮಾಣ ಬಿಟ್ಟು ಕೂಟ್ಟ…ಶಂಢ ಸಾವರ್ಕರ್ ನನ್ನು ಸಮರ್ಥಿಸುವ..ಮೋ..ಶಾ..ದರಿದ್ರ ಆಢಳಿತ…ಭಾರತೀಯಮಣ್ಣಿನ ಮಕ್ಕಳ…ಮನೆ.ಗಳನ್ನು ..ಅಕ್ರಮ ಎಂಬ ಹಣೆಪಟ್ಟಿ ಕಟ್ಟಿ..ಕೆಡವಿ ವಿಕ್ರತ ಆನಂದ ಮೆರೆಯುತ್ತಿರುವ..ರಾಷ್ಟ ಪಿತ ಗಾಂಧೀಜಿ ಹಂತಕರ ವಂಶಸ್ಥರಿಗೆ..ನಾಚಿಕೆ ಆಗಬೇಕು