ಉಳ್ಳಾಲ: SჄS ಕಿನ್ಯ ಸೆಂಟರ್ ಸಮಿತಿ ಆಯೋಜಿಸಿದ್ದ ತಾಜುಲ್ ಫುಖಹಾಅ್ ದರ್ಸ್ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಸೆಂಟರ್ ಕಚೇರಿಯಲ್ಲಿ ನಡೆಯಿತು.
ಧಾರ್ಮಿಕ ಅರಿವಿನ ಅನಿವಾರ್ಯತೆ ಮತ್ತು ಶೈಖುನಾ ಮರ್ಹೂಂ ಬೇಕಲ್ ಉಸ್ತಾದ್ ರವರ ಜ್ಞಾನದ ಆಳವನ್ನು ಸಭಿಕರಿಗೆ ಮನಮುಟ್ಟುವಂತೆ ಮಾತನಾಡಿ SჄS ದ.ಕ ವೆಸ್ಟ್ ಅಧ್ಯಕ್ಷ ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಉಸ್ತಾದ್ ರವರು ಪವಿತ್ರ ಖುರ್’ಆನಿನ ‘ಅಲ್ ಫಾತಿಹಾಃ’ ಅಧ್ಯಾಯವನ್ನು ಓದಿ ಕೊಡುವ ಮೂಲಕ ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಸೆಂಟರ್ ಸಮಿತಿ ಅಧ್ಯಕ್ಷರಾದ ಹಾಜಿ ಬಿ. ಎಂ ಇಸ್ಮಾಈಲ್ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಉಪಾಧ್ಯಕ್ಷ ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ತಂಙಳ್ ಕಿನ್ಯ ದುಆ ನಡೆಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಸಾಗ್ ಸಮಾವೇಶದಲ್ಲಿ ಆಗಮಿಸಿದ ಗಣ್ಯರು ಹಾಗೂ ಸಭಿಕರಿಗೆ ಸ್ವಾಗತ ಕೋರಿದರು. ಮುನ್ನುಡಿ ಭಾಷಣ ಮಾಡಿದ ದಅ್’ವಾ ಕಾರ್ಯದರ್ಶಿ ಹನೀಫ್ ಸಖಾಫಿ ಖುತುಬಿನಗರ ಧಾರ್ಮಿಕ ತರಗತಿಗಳನ್ನು ಅತ್ಯಂತ ಯಶಸ್ವಿ ಯಾಗಿ ಮುನ್ನಡೆಸುವಂತೆ ಕರೆ ನೀಡಿದರು.
ಉಡುಪಿ ಜಿಲ್ಲಾ ಉಲಮಾ ಒಕ್ಕೂಟದ ಅಧ್ಯಕ್ಷ ಅಶ್ರಫ್ ಸಖಾಫಿ ಸಂದೇಶ ಭಾಷಣ ಮಾಡಿ ಜ್ಞಾನ ಸಂಪಾದನೆಯು ಇತರ ಸರ್ವ ಸತ್ಕರ್ಮಕ್ಕಿಂತಲೂ ಮಿಗಿಲು,ಆದ್ದರಿಂದ ಎಲ್ಲರೂ ಅರಿವು ಸಂಪಾದನೆಯಲ್ಲಿ ಸಕ್ರಿಯರಾಗಲು ತಿಳಿಸಿದರು.
ಸುನ್ನೀ ಸಂಘ-ಸಂಸ್ಥೆಗಳ ಮುಂಚೂಣಿ ನಾಯಕ ಕೆ.ಎಂ ಇಬ್ರಾಹೀಂ ಹಾಜಿ ಖುತುಬಿನಗರ,SჄS ರಾಜ್ಯ ಸಮಿತಿ ನಾಯಕ ಕೆ.ಎಚ್ ಇಸ್ಮಾಈಲ್ ಸಅದಿ ಕಿನ್ಯ,ಕೆಸಿಎಫ್ ನಾಯಕ ಇಬ್ರಾಹೀಂ ಕುರಿಯ,ಸೆಂಟರ್ ಸೋಶಿಯಲ್ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸಾಮಣಿಗೆ,ಖುತುಬಿನಗರ ಬ್ರಾಂಚ್ ಅಧ್ಯಕ್ಷ ಅಬೂಸ್ವಾಲಿಅ್,ರಹಮತ್ ನಗರ ಅಧ್ಯಕ್ಷ ಅಬ್ದುಲ್ ಅಝೀಝ್ ಕಜೆ,ಕುರಿಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಷೀರ್ ಲತೀಫಿ,ಬೆಳರಿಂಗೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಕೆ.ಐ ಮುಹಮ್ಮದ್ ಹನೀಫ್ ಸ್ಟೋರ್,ಬದ್ರಿಯ್ಯಾನಗರ ಸಮಿತಿ ಅಧ್ಯಕ್ಷ ಕೆ.ಎಚ್ ಮೂಸಕುಂಞಿ,ಮೀಂಪ್ರಿ ಬ್ರಾಂಚ್ ಅಧ್ಯಕ್ಷ ಆಲಿಕುಂಞಿ,ಉಕ್ಕುಡ ಸಮಿತಿ ಅಧ್ಯಕ್ಷ ಮುಹಮ್ಮದ್ ಹಸನ್ ಮುಂತಾದವರು ಉಪಸ್ಥಿತರಿದ್ದರು,ಸೆಂಟರ್ ಸಮಿತಿ ಕೋಶಾಧಿಕಾರಿ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ಕೊನೆಯಲ್ಲಿ ವಂದಿಸಿದರು.





















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ