ಎಣ್ಮೂರು: ರಿಫಾಯಿಯ್ಯ ಜುಮ್ಮಾ ಮಸೀದಿ ಎಣ್ಮೂರು-ಮುಚ್ಚಿಲ ದಲ್ಲಿ ನೂತನವಾಗಿ ಆರಂಭವಾದ ದರ್ಸ್ ಉಧ್ಘಾಟನಾ ಸಮಾರಂಭ ಮೇ 18 ಬುಧವಾರ ಅಸ್ಸಯ್ಯಿದ್ ಝೈನುಲ್ ಆಬಿದೀನ್ ಅಲ್ ಬುಖಾರಿ ಎಣ್ಮೂರ್ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಿತು.
ಅಸ್ಸಯ್ಯಿದ್ ಇಬ್ನು ಮೌಲಾ ತಂಙಳ್ ಅಲ್ ಬುಖಾರಿ ದುಆಃ ನೇತೃತ್ವ ನೀಡಿದರು. ಕಾರ್ಯಕ್ರಮದ ಉಧ್ಟಾಟನೆಯನ್ನು ಅಬ್ದುಲ್ ರಹಿಮಾನ್ ಕಾಮಿಲ್ ಸಖಾಫಿ ಪುದುಪರಂಬ್ ನೆರವೇರಿಸಿದರು.
ಅಸ್ಸಯ್ಯಿದ್ ಝೈನುಲ್ ಆಬಿದೀನ್ ಅಲ್ ಬುಖಾರಿ ಎಣ್ಮೂರ್ ತಂಙಳ್ ರವರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ರಿಫಾಯಿಯ್ಯ ಜುಮ್ಮಾ ಮಸೀದಿ ಎಣ್ಮೂರು-ಮುಚ್ಚಿಲ ಇದರ ಅಧೀನದಲ್ಲಿ ಸ್ವಲಾಹುಲ್ ಹುದಾ ದರ್ಸ್ ಉಡುಪಿ ಚಿಕ್ಕಮಗಳೂರು ಖಾಝಿಗಳಾದ ಝೈನುಲ್ ಉಲಮಾ ಮಾಣಿ ಉಸ್ತಾದರು ಉಧ್ಘಾಟಿಸಿದರು.
ಅಸ್ಸಯ್ಯಿದ್ ಅಹ್ದಲ್ ತಂಙಳ್ ಮುಹಿಮ್ಮಾತ್ ರವರು ಆಶಂಸ ಪ್ರಭಾಷಣ ನಡೆಸಿದರು.
ವೇದಿಕೆಯಲ್ಲಿ ಮುದರ್ರಿಸರಾದ ಅಬ್ದುಲ್ ಹಮೀದ್ ಅಹ್ಸನಿ ಕಾಸರಗೋಡು, ಅಬ್ದುಲ್ಲಾ ಮದನಿ ಖತೀಬ್ ಎಣ್ಮೂರು, ಇಸ್ಮಾಯಿಲ್ ಹಾಜಿ ಪಾಜಪ್ಪಲ, ಮೂಸ ಹಾಜಿ ಜೀರ್ಮುಕಿ, ಮಹ್ಮೂದ್, ಇಸ್ಮಾಯಿಲ್ ಐತ್ತೊಕ್ಲು, ಮುಹಮ್ಮದ್ ನಿಂತಿಕಲ್ಲು, ಮುಹಮ್ಮದ್ ಪುತ್ತು ಮುಚ್ಚಿಲ, ಅಶ್ರಫ್ ಸಿಎಂ ಮುಂತಾದ ಹಲವಾರು ಗಣ್ಯರ ಸೇರಿದಂತೆ ಹಲವಾರು ದರ್ಸ್ ವಿದ್ಯಾರ್ಥಿಗಳು, ಪೋಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ವಲಾವುದ್ದೀನ್ ಸಖಾಫಿ ಸ್ವಾಗತಿಸಿದರು.