ನವದೆಹಲಿ: ಒಂದಡೆ ಉತ್ತರ ಪ್ರದೇಶದಲ್ಲಿ ಕೋಮು ಸಂಘರ್ಷಕ್ಕಿಳಿದವರ ವಿರುದ್ಧ ಯೋಗಿ ಆದಿತ್ಯನಾಥ್ ಬುಲ್ಲೊಜರ್ ಪ್ರಯೋಗಿಸಿದ್ರೆ, ಇತ್ತ ದಿಲ್ಲಿಯಲ್ಲಿ ಮಹಾನಗರ ಪಾಲಿಕೆ ಅನಧಿಕೃತ ಕಟ್ಟಡ ತೆರವಿಗೆ ಬುಲ್ಲೊಜರ್ ರಸ್ತೆಗಿಳಿಸಿದೆ. ಆದ್ರೆ ಇದರಿಂದ ಸಾವಿರಾರು ಜನ ರಸ್ತೆಗೆ ಬಂದಿದ್ದು, ಪಾಲಿಕೆ ಕ್ರಮದ ಬಗ್ಗೆಯೇ ಟೀಕೆ ಶುರುವಾಗಿದ್ದು, ವಿಶ್ವವ್ಯಾಪಿ ಸುದ್ದಿಯಾಗಿದೆ.
ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ತೆರವಿಗಾಗಿ ದಿಲ್ಲಿ ಮಹಾನಗರ ಪಾಲಿಕೆ ಬುಲ್ಲೋಜರ್ ಕಾರ್ಯಾಚರಣೆ ಮಾಡ್ತಿದೆ. ಬುಲ್ಲೊಜರ್ ಬಳಸಿ ಅನಧಿಕೃತವಾಗಿ ನಿರ್ಮಿಸಲಾದ ಕಟ್ಟಡಗಳನ್ನ ನೆಲಸಮ ಮಾಡ್ತಾ ಸಾಗಿದೆ. ಈ ವಿವಾದಿತ ಕಾರ್ಯಾಚರಣೆಗೆ ಆರಂಭದಿಂದಲೂ ವಿರೋಧ ವ್ಯಕ್ತವಾಗಿತ್ತು. ಈಗ ದಿಲ್ಲಿ ಸಿಎಂ ಕೇಜ್ರಿವಾಲ್ ಅವರೇ ಇದರ ವಿರುದ್ಧ ತಿರುಗಿಬಿದ್ದಿದ್ದಾರೆ.
ದೆಹಲಿಯಲ್ಲಿ ಬಡಜನರ ಮನೆಗಳನ್ನ ಅಕ್ರಮವಾಗಿ ನಿರ್ಮಾಣವಾಗಿವೆ ಎಂದು ಮಹಾನಗರ ಪಾಲಿಕೆ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಮನೆಗಳನ್ನ ಕಳೆದುಕೊಂಡು ಸಾವಿರಾರು ಜನರು ಬೀದಿಪಾಲಾಗಿದ್ದಾರೆ. ಮನೆ ಕಳೆದುಕೊಂಡ ಜನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಇದರಿಂದ ಎಚ್ಚೆತ್ತ ಸ್ವತಃ ದೆಹಲಿ ಸರ್ಕಾರ ಮಹಾನಗರ ಪಾಲಿಕೆಯ ತೆರವು ಕಾರ್ಯಾಚರಣೆಯ ನಿರ್ಧಾರಕ್ಕೆ ಆಕ್ರೋಶ ಹೊರಹಾಕಿದೆ. ಈ ರೀತಿಯಾಗಿ ಬಡವರ ಹೊಟ್ಟೆ ಮೇಲೆ ಹೊಡೆಯುವುದು ಸರಿಯಲ್ಲ. ಮೊದಲು ಬುಲ್ಲೋಜರ್ ಬಳಸಿ ಅತಿಕ್ರಮಣ ಮಾಡುತ್ತಿರುವುದನ್ನ ನಿಲ್ಲಿಸಿ ಗೂಂಡಾ ವರ್ತನೆಗೆ ಬ್ರೇಕ್ ಹಾಕುವಂತೆ ಒತ್ತಾಯಿಸಿದೆ.