ಇತ್ತೀಚೆಗೆ ಜಿಲ್ಲೆಯ ನಿರ್ಧಿಷ್ಟ ಪ್ರದೇಶದಲ್ಲಿ ಮತ್ತು ಕೊಡಗಿನಲ್ಲಿ ಸಂಘಟನೆಯ ಕಾರ್ಯಕರ್ತರಿಗೆ ಅಕ್ರಮವಾಗಿ ಶಸ್ತ್ರಾಸ್ತ್ರ ತರಬೇತಿ ನೀಡಿದ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ ಮತ್ತು ಹಲವೆಡೆ ಸಾರ್ವಜನಿಕ ಸಭೆಗಳಲ್ಲಿ ತ್ರಿಶೂಲ ವಿತರಣೆ ಮಾಡಲಾಗಿದೆ.
ಕಾನೂನಾತ್ಮಕವಾಗಿ ಇದು ಭಾರತದ ಆಯುಧ ಕಾಯ್ದೆಯ ಅಡಿಯಲ್ಲಿ ಗಂಭೀರ ಅಪರಾಧ ಕೃತ್ಯ. ಆದರೆ ಇದು ಸರಕಾರಿ ಪ್ರಾಯೋಜಿತ ಕೃತ್ಯದಂತೆ ಕಾಣುತ್ತದೆ. ಸಂಘಟನೆಗಳ ಕಾರ್ಯಕರ್ತರನ್ನು ಅನ್ಯ ಮತೀಯರ ವಿರುದ್ಧ ಛೂ ಬಿಟ್ಟು ಕೋಮು ಗಲಭೆ ಸೃಷ್ಟಿಸುವುದು ಸಂಘೀ ನಿಕೇತನಿಗಳ ವ್ಯವಸ್ಥಿತ ಷಡ್ಯಂತ್ರ ಇದಾಗಿದೆ.
ಸಿ. ಟಿ.ರವಿ ಇಂತಹ ತರಬೇತಿ ಗಳಲ್ಲಿ ತಪ್ಪೇನಿದೆ ಎಂದು ಕೃಪಾ ಲಿಖಿತ ಹೇಳಿಕೆಯಂತೆಯೆ ಪ್ರಶ್ನಿಸಿದ್ದಾರೆ. ಹಿಂದುಳಿದ ವರ್ಗಗಳ, ದಲಿತರ, ಪರಿಶಿಷ್ಟರ ಯುವಕರನ್ನು ವಿದ್ವಂಸಕ ಕೃತ್ಯಗಳಿಗೆ ಇಳಿಸಿ ತಾನು ಮತ್ತು ವೈದಿಕ ಮೇಲ್ವರ್ಗ ಅಧಿಕಾರ ಪಡೆಯಲಿದೆ.
ಸಿ.ಟಿ.ರವಿಗೆ ತಾಕತ್ತು ಇದ್ದರೆ, ಹಿಂದುಳಿದ ವರ್ಗಗಳ, ದಲಿತರ, ಪರಿಶಿಷ್ಟರ ಮತ್ತು ಬುಡಕಟ್ಟು ಜನಾಂಗದವರನ್ನು ಹಿಂದೂಗಳು ಎಂದು ಪರಿಗಣಿಸಿ, ಅವರಿಗೆ ಶಸ್ತ್ರಾಸ್ತ್ರ ತರಭೇತಿ ಬದಲು ಗುರುಕುಲ ವ್ಯವಸ್ಥೆಯಲ್ಲಿ ವೇದ, ಉಪನಿಷತ್, ಪುರಾಣಗಳ ಭೋಧನೆ ನೀಡಿ ಪಂಡಿತ ಪ್ರಾವೀಣ್ಯತೆ ನೀಡುವ ವ್ಯವಸ್ಥೆ ಮಾಡಲಿ. ಆಗ ತಾನು ಪ್ರತಿಪಾದಿಸುವ ಹಿಂದುತ್ವಕ್ಕೆ ಸ್ವಲ್ಪವಾದರೂ ನ್ಯಾಯ ಲಭಿಸಬಹುದು.
ಕೆ.ಅಶ್ರಫ್
ಅಧ್ಯಕ್ಷರು.ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟ.