janadhvani

Kannada Online News Paper

ಮೇ.14:ಉಡುಪಿ ಸಾಮರಸ್ಯ ನಡೆ ಯಶಸ್ವಿ ಗೊಳಿಸಿ- ಮುಸ್ಲಿಮ್ ಒಕ್ಕೂಟ ಕರೆ

ಮಂಗಳೂರು: ಮೇ 14 ರಂದು ಅಪರಾಹ್ನ 2.00 ರಿಂದ ಉಡುಪಿ ಅಜ್ಜರಕಾಡು ವಿನಲ್ಲಿ ನಡೆಯುವ ಸಾಮರಸ್ಯ ನಡೆ ಬೃಹತ್ ಜಾಥಾ ಮತ್ತು ಸಂಜೆ ನಡೆಯುವ ಸಭಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಕರೆ ನೀಡಿದೆ.

ಕರ್ನಾಟಕ ನಾಡು ವಿವಿಧತೆಯಲ್ಲಿ ಏಕತೆ ಸಾರುವ ನಾಡು, ಕುವೆಂಪು ಕನಸಿನ ಸರ್ವ ಜನಾಂಗದ ಶಾಂತಿಯ ತೋಟ, ಸಹಬಾಳ್ವೆ , ಸಾಮರಸ್ಯ ಉದ್ದೇಶಿತ ರಾಜ್ಯ ಮಟ್ಟದ, ಸಮಾನ ಮನಸ್ಕರ ಪ್ರಾಯೋಜಕತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಂತಿ ಪ್ರಿಯ, ಬಹುತ್ವ ಪ್ರೇಮಿ, ಪ್ರಜಾ ಸತ್ತಾತ್ಮಕ ನಂಬಿಕಸ್ತ ಸರ್ವರೂ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ ಕೆ.ಅಶ್ರಫ್ ಅವರು ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com