ಮಂಗಳೂರು: ಈ ದೇಶವು ಆದ್ಯಾತ್ಮಿಕ ನೆಲೆಗಟ್ಟು ಮತ್ತು ನಂಬಿಕೆಯಿಂದ ನಿಂತಿದೆ. ಭಾರತದ ಮುಸ್ಲಿಮರು ದೇವಾರಧಕರು ಮತ್ತು ಅಷ್ಟೇ ದೃಢವಾಗಿ ದೇಶ ಪ್ರೇಮಿಗಳು ಕೂಡ.ಮುಸ್ಲಿಮರಿಗೆ ಭಾರತದಲ್ಲಿ ಧರ್ಮವಿಲ್ಲದೆ ದೇಶವಿಲ್ಲ.
ಪ್ರತೀ ಮುಸ್ಲಿಮನ ಆರಾಧನೆಯು ಅಲ್ಲಾಹನಿಗೆ ಅರ್ಪಿತ. ಅಲ್ಲಾಹನ ಪ್ರಾರ್ಥನೆಗೆ ಇರುವ ಕರೆ ಅಝಾನ್ ಎಂಬುದು ನಿಸರ್ಗ ನಿಯಮ, ಈ ಕರೆಯನ್ನು ಹಿಂದೆಂದಿಗಿಂತಲೂ ಸಮರ್ಪಕವಾಗಿ , ಸ್ಪಷ್ಟವಾಗಿ ಮತ್ತು ಸುಂದರವಾಗಿ ಕರೆಯಲಾಗುವುದು. ದೇವ ಪ್ರಣಾಮದ ಕರೆಯನ್ನು ಸೀಮಿತಗೊಳಿಸುವ ಪ್ರಶ್ನೆಯೇ ಉದ್ಭವಿಸುವದಿಲ್ಲ.
ಅಲ್ಲಾಹನಿಗೆ ಪ್ರಾರ್ಥನೆಯ ಆಮಂತ್ರಣ ಕರೆ ಆಝಾನ್ ನ್ನು ಈ ಹಿಂದಿನಂತೆಯೇ ಕರೆಯುತ್ತೇವೆ. ಈ ನಿರ್ಧಿಷ್ಟ ಕರೆಯನ್ನು ಈ ಹಿಂದೆ, ತಡೆಯಲು ಅದೆಷ್ಟೋ ಕಿಂಕರರು ಪ್ರಯತ್ನಿಸಿದರೂ ನಿಸರ್ಗ ಮತ್ತು ಈ ಜಗದ ಸುವ್ಯವಸ್ಥೆಯು ಅಂತವರಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲೂ ಅದೇ ಸಂಭವಿಸುವುದು.
ನಮಾಝ್ ಗಿರುವ ಅಝಾನ್ ಕರೆ ತಡೆಯಲು ಈ ಹಿಂದೆ ಪ್ರಯತ್ನಿಸಿದ ಮುತಾಲಿಕರ ಪೂರ್ವಜರಿಗೆ ಏನು ಶಾಸ್ತಿ ಆಗಿದೆಯೋ ಅದೇ ಮುತಾಲಿಕರ ಪ್ರಯತ್ನದಲ್ಲೂ ಸಂಭವಿಸಲಿದೆ. ದೇವ ಪ್ರಾರ್ಥನೆಯ ಕರೆಯನ್ನು ಪ್ರಶ್ನಿಸುವ ಮುತಾಲಿಕ್ ಸಂತತಿಯವರು ಈ ಬಗ್ಗೆ ನಿಗಾ ಹೊಂದುವುದು ಒಳಿತು. ಶಬ್ದ ಮಾಲಿನ್ಯ ಮತ್ತು ಶ್ರವಣ ಮಾಲಿನ್ಯದ ವ್ಯತ್ಯಾಸವನ್ನು ಅರಿಯುವುದು ಒಳಿತು ಎಂದು ಕೆ.ಅಶ್ರಫ್(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ