ಕೆಸಿಎಫ್ ಕುವೈಟ್ ನೋರ್ತ್ ಝೋನ್ ಅಧೀನ ದಲ್ಲಿರುವ ಕೆಸಿಎಫ್ ಫರ್ವಾನಿಯ ಸೆಕ್ಟರ್ ವತಿಯಿಂದ ಗ್ರಾಂಡ್ ಇಫ್ತಾರ್ ಕೂಟ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ರಮ್ಲಾನ್ ವಿಶೇಷ ಸಂದೇಶ ಫರ್ ವಾನಿಯ ಸೆಕ್ಟರ್ ಅಧ್ಯಕ್ಷ ಜನಾಬ್ ಇಕ್ಬಾಲ್ ಎಡಪದವು ರವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆ ಯಿಂದ ಯಶಸ್ವಿಯಾಗಿ 27/4/2022 ಬುಧವಾರ ಸಂಜೆ 5.00ಕ್ಕೆ ಸರಿಯಾಗಿ ಕೆಸಿಎಫ್ ಫರ್ ವಾನಿಯ ಸೆಕ್ಟರ್ ಕಚೇರಿಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ರಾದ ಬಹುಮಾನ್ಯ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರ ನೇತ್ರತ್ವದಲ್ಲಿ ಸ್ವಲಾತ್ ಹಾಗೂ ಇಫ್ತಾರ್ ಕೂಟ ನಡೆಯಿತು.
ಕಾರ್ಯಕ್ರಮದಲ್ಲಿ ರಂಜಾನ್ ಸಂದೇಶ ವನ್ನು ಕೆಸಿಎಫ್ INC ಸಂಘಟನಾ ಕಾರ್ಯದರ್ಶಿ ಆದ ಬಹುಮಾನ್ಯ ಹುಸೈನ್ ಎರ್ಮಡ್ ಉಸ್ತಾದರು ರಂಜಾನ್ ಸಂದೇಶವನ್ನು ಸಾರಿದರು
ಅದೇ ರೀತಿ ಕಾರ್ಯಕ್ರಮದಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿ ಸದಸ್ಯರಾದ ಬಹುಮಾನ್ಯ ಉಮರುಲ್ ಫಾರೂಕ್ ಸಖಾಫಿ ಮತ್ತು ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಸಾಂತ್ವನ ಅಧ್ಯಕ್ಷರಾದ ಯಾಕೂಬ್ ಕಾರ್ಕಳ ಹಾಗೂ ಸೆಕ್ಟರ್ ಸದಸ್ಯರಾದ ಹೈದರ್ ಹಾಜಿ ಪಟ್ಟೋರಿ ಮತ್ತು ರಾಷ್ಟ್ರೀಯಸಮಿತಿ ಝೋನ್, ಹಾಗೂ ಸೆಕ್ಟರ್ ನಾಯಕರು ಭಾಗವಹಿಸಿದರು.
ಕೊನೆಯಲ್ಲಿ ಫರ್ವಾಣಿಯ ಸೆಕ್ಟರ್ ಕಾರ್ಯದರ್ಶಿ ಜನಾಬ್ಆಸೀಫ್ ಸಾಗರ್ ಧನ್ಯವಾದ ಗೈದರು.