ಬೆಂಗಳೂರು,ಏ.25: ಜಗತ್ತಿನ ಹಲವು ದೇಶಗಳನ್ನ ತಲ್ಲಣಿಸಿರುವ ಕೊರೊನಾ ವೈರಾಣು ಭಾರತದಲ್ಲೂ ಅನಾಹುತ ಸೃಷ್ಟಿಸುವ ಸೂಚನೆ ನೀಡುತ್ತಿದೆ. ಈಗಾಗಲೇ ರಾಷ್ಟ್ರ ರಾಜಧಾನಿ ಕೊರೊನಾ ಹಾಟ್ಸ್ಪಾಟ್ ಆಗಿದ್ದು, ಇತರ ರಾಜ್ಯಗಳಲ್ಲು ಸೋಂಕಿತರ ಸಂಖ್ಯೆ ಏರುಗತಿಯ ಹಾದಿ ಹಿಡಿದಿದೆ. ಈ ನಡುವೆ ಕೊರೊನಾ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಕುರಿತು ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಸಭೆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಇವತ್ತು ಸಿಎಂ ಅವರ ನೇತೃತ್ವದಲ್ಲಿ ಕೊರೊನಾ ನಾಲ್ಕನೇ ಅಲೆ ಆಗಮನ ಸೂಚನೆ ಹಿನ್ನೆಲೆಯಲ್ಲಿ ಸಭೆ ಮಾಡಲಾಯಿತು. ಸಭೆಯಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಇವತ್ತು ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಆದರೆ ಈ ಬಗ್ಗೆ ದಂಡ ವಿಧಿಸಲು ನಿರ್ಧಾರ ಮಾಡಿಲ್ಲ. ಅಲ್ಲದೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇರೋ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರಿನಲ್ಲಿ 1.9% ಪಾಸಿಟಿವಿಟಿ ದರ ದಾಖಲಾಗಿದೆ. ಲಸಿಕೆ, ಬೂಸ್ಟರ್ ಲಸಿಕೆ ಹಾಕಿಸಿಕೊಳ್ಳಲು ಜನತೆಗೆ ಮನವಿ ಮಾಡುತ್ತೇವೆ. ನಾಲ್ಕನೇ ಅಲೆವರೆಗೂ ಕಾಯುವುದು ಬೇಡ. ಲಸಿಕೆ ಹಾಕಿಸಿಕೊಳ್ಳಿ. ದಕ್ಷಿಣ ಕೊರಿಯಾ, ಥೈಲ್ಯಾಂಡ್, ಜಪಾನ್ ಗಳಿಂದ ಬೆಂಗಳೂರಿಗೆ ಬರುವವರ ಮೇಲೆ ನಿಗಾ ವಹಿಸಲು ಏರ್ಪೋರ್ಟ್ಗಳಲ್ಲಿ ಸೂಚನೆ ನೀಡಲಾಗಿದೆ ಎಂದರು.
















ಇನ್ನಷ್ಟು ಸುದ್ದಿಗಳು
ಭಯ ಬೇಡ: ಭಾರತದಲ್ಲಿ ಕೆಲವು ಕ್ಯಾನ್ಸರ್ ಅನ್ನು ತಡೆಗಟ್ಟಲು ಸಾಧ್ಯ- ವಿಶ್ವ ಆರೋಗ್ಯ ಸಂಸ್ಥೆ
ಸೌದಿ ಅರೇಬಿಯಾದಲ್ಲಿ ಹೃದಯಾಘಾತ ಮರಣ ಸಂಖ್ಯೆ ಹೆಚ್ಚಳ
ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಸ ಹಿ ಉ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಕಣಚೂರು ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ- ಫೆ 28 ರಿಂದ
ಗಂಭೀರ ಕಾಯಿಲೆಗಳಿದ್ದರೆ ಮಾತ್ರ ಆಸ್ಪತ್ರೆಗೆ ಭೇಟಿ ನೀಡಿ- ಆರೋಗ್ಯ ಇಲಾಖೆ
ಲಾಕ್ ಡೌನ್ ಇಲ್ಲ, ಓಮಿಕ್ರಾನ್ ಬಗ್ಗೆ ಆಲಕ್ಷ್ಯ ಬೇಡ- ಆರೋಗ್ಯ ಸಚಿವ ಡಾ.ಕೆ ಸುಧಾಕರ್
1.5 ವರ್ಷದ ಕಂದಮ್ಮನಿಗಾಗಿ ಮಿಡಿದ ಹೃದಯಗಳು: 7 ದಿನಗಳಲ್ಲಿ 18 ಕೋಟಿ ಸಂಗ್ರಹ
ಕೇರಳದಂತೆ ಕರ್ನಾಟಕದಲ್ಲೂ ಅನಿವಾಸಿಗರಿಗೆ ಪ್ರತ್ಯೇಕ ವಾಕ್ಸಿನ್ ಪ್ರಮಾಣ ಪತ್ರ ನೀಡಲು ಡಾ| ಆರತಿಕೃಷ್ಣ ರವರಿಂದ ರಾಜ್ಯ ಸರಕಾರಕ್ಕೆ ಮನವಿ
ಕೋವಿಡ್ ವಾಕ್ಸಿನ್ ಸರ್ಟಿಫಿಕೇಟ್ Aarogya Setu ಅಪ್ಲಿಕೇಶನ್ ನಲ್ಲಿ ಲಭ್ಯ.
ಮಕ್ಕಳ ಕೈಗೆ ಮೊಬೈಲ್: ಚಟವಾಗದಿರಲು ಏನು ಮಾಡಬೇಕು?