ನವದೆಹಲಿ: ಏಪ್ರಿಲ್ 11: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ ಯು) ಕ್ಯಾಂಪಸ್ ನಲ್ಲಿ ಹಿಂಸಾಚಾರದಲ್ಲಿ ವಿದ್ಯಾರ್ಥಿಗಳು ಗಾಯಗೊಂಡ ಒಂದು ದಿನದ ನಂತರ ದೆಹಲಿ ಪೊಲೀಸರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೊಂದಿಗೆ ಸಂಯೋಜಿತವಾಗಿರುವ ಹಲವಾರು ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
“ಸೋಮವಾರ ಮುಂಜಾನೆ ಜೆಎನ್ ಯುಎಸ್ ಯು, ಎಸ್ ಎಫ್ ಐ, ಡಿಎಸ್ ಎಫ್ ಮತ್ತು ಎಐಎಸ್ ಎ ಸದಸ್ಯರಾಗಿರುವ ವಿದ್ಯಾರ್ಥಿಗಳ ಗುಂಪಿನಿಂದ ಅಪರಿಚಿತ ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ನಾವು ದೂರು ಸ್ವೀಕರಿಸಿದ್ದೇವೆ. ವಸಂತ್ ಕುಂಜ್ (ಉತ್ತರ) ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323 (ನೋವು ಉಂಟುಮಾಡುವುದು), 341 (ತಪ್ಪಾದ ಸಂಯಮ), 509 (ಮಹಿಳೆಯರ ನಮ್ರತೆಗೆ ಆಕ್ರೋಶ), 506 (ಬೆದರಿಕೆ) ಮತ್ತು 34 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ. ಅಪರಾಧಿಗಳನ್ನು ಗುರುತಿಸಲು ವಾಸ್ತವಿಕ ಮತ್ತು ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಉಪ ಆಯುಕ್ತ (ನೈಋತ್ಯ) ಮನೋಜ್ ಸಿ ಹೇಳಿದರು.
ಘಟನೆಯಲ್ಲಿ ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆಂದು ಪೊಲೀಸರು ಹೇಳುತ್ತಿದ್ದರೆ, ಎಡಪಂಥೀಯರ ಪ್ರಕಾರ ಈ ಸಂಖ್ಯೆ 50ರಿಂದ 60 ಆಗಿದೆ. ಎಬಿವಿಪಿ ಹೇಳುವಂತೆ ಅದರ 8-10 ಕಾರ್ಯಕರ್ತರು ಸೇರಿದಂತೆ 15-20 ಮಂದಿ ಗಾಯಗೊಂಡಿದ್ದಾರೆ.
ಎಡಪಂಥೀಯ ಸಂಘಟನೆಗಳಿಗೆ ಸೇರಿದ ವಿದ್ಯಾರ್ಥಿಗಳ ಪ್ರಕಾರ ಕಾವೇರಿ ಹಾಸ್ಟೆಲ್ ಮೆಸ್ನಲ್ಲಿ ಮಾಂಸಾಹಾರಿ ಆಹಾರ ತಯಾರಿಸುವುದಕ್ಕೆ ಎಬಿವಿಪಿ ವಿದ್ಯಾರ್ಥಿಗಳು ತಡೆ ಹೇರಿದ್ದರು. “ಪ್ರತಿ ಭಾನುವಾರ ಎಲ್ಲಾ ಹಾಸ್ಟೆಲ್ಗಳಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆ ಸಿದ್ಧವಾಗುತ್ತದೆ. ಆದರೆ ಕಾವೇರಿ ಹಾಸ್ಟೆಲ್ ಸಮೀಪ ಎಬಿವಿಪಿ ವಿದ್ಯಾರ್ಥಿಗಳು ಯಾವುದೋ ಕಾರ್ಯಕ್ರಮ ನಡೆಸುತ್ತಿದ್ದರು ಆ ಸಂದರ್ಭ ಕೋಳಿಮಾಂಸ ಸರಬರಾಜು ಮಾಡುವವರು ಅಲ್ಲಿಗೆ ಆಗಮಿಸಿದಾಗ ಆವರನ್ನು ತಡೆದು ಅವರನ್ನು ಹಾಗೂ ಮೆಸ್ ಕಾರ್ಯದರ್ಶಿ ಅವರಿಗೆ ಕಿರುಕುಳ ನೀಡಿ ಅಲ್ಲಿ ಹವನ ನಡೆಯುತ್ತಿದೆ ಹಾಗೂ ಮಾಂಸಾಹಾರಿ ಆಹಾರ ತಯಾರಿಸುವಂತಿಲ್ಲ” ಎಂದು ಹೇಳಲಾಯಿತು ಎಂದು ಜೆಎನ್ಯು ವಿದ್ಯಾರ್ಥಿ ಯೂನಿಯನ್ ಕೌನ್ಸಿಲರ್ ಅನಘಾ ಪ್ರದೀಪ್ ಹೇಳಿದ್ದಾರೆ.
ಆದರೆ ರಾಮ ನವಮಿ ಪೂಜೆಗೆ ಅಡ್ಡಿಯುಂಟು ಮಾಡಲು ಯತ್ನಿಸಲಾಗಿತ್ತು ಎಂದು ಎಬಿವಿಪಿ ಸದಸ್ಯರು ಹೇಳಿದ್ದಾರಲ್ಲದೆ ಮಾಂಸಾಹಾರಿ ಆಹಾರ ಇಲ್ಲಿ ಸಮಸ್ಯೆಯಾಗಿರಲಿಲ್ಲ ಎಂದಿದ್ದಾರೆ. “ಕಾವೇರಿ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳು ರಾಮ ನವಮಿ ಹವನ ನಡೆಸುತ್ತಿದ್ದಾಗ ಅದನ್ನು ತಡೆಯಲು ಎಡಪಂಥೀಯರು ಪ್ರಯತ್ನಿಸುತ್ತಿದ್ದರು. 3.30ಗೆ ಆರಂಭಗೊಳ್ಳಬೇಕಿದ್ದ ಕಾರ್ಯಕ್ರಮ ಇದರಿಂದಾಗಿ 5 ಗಂಟೆಗೆ ಆರಂಭಗೊಂಡಿತು. ಯಾರೂ ಮಾಂಸಾಹಾರವನ್ನು ವಿರೋಧಿಸಿಲ್ಲ, ಅದನ್ನೊಂದು ನೆಪವಾಗಿಸಲಾಗಿದೆ. ಹಾಸ್ಟೆಲ್ನಲ್ಲಿ ಇಫ್ತಾರ್ ಕೂಟ ಮತ್ತು ಹವನ ನಡೆಯುತ್ತಿದ್ದರೂ ಯಾವುದೇ ಸಮಸ್ಯೆಯಿರಲಿಲ್ಲ,” ಎಂದು ಎಬಿವಿಪಿ ಸಂಯೋಜಿತ ವಿದ್ಯಾರ್ಥಿಗಳು ಹೇಳಿದ್ದಾರೆ.
















ಇನ್ನಷ್ಟು ಸುದ್ದಿಗಳು
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಮುಂದಿನ 24 ಗಂಟೆಗಳಲ್ಲಿ ಯು.ಎಸ್-ಇರಾನ್ ಶಾಂತಿ ಒಪ್ಪಂದ ಅಂತಿಮ: ಪಾಕ್ ಪ್ರಧಾನಿ ಶಹಬಾಝ್ ಷರೀಫ್
ಮೂವರು ಭಾರತೀಯ ನಾವಿಕರ ಸಾವು: ಯು.ಎಸ್ ವಿರುದ್ಧ ವಿದೇಶಾಂಗ ಸಚಿವ ಜೈಶಂಕರ್ ಆಕ್ರೋಶ
ಜಿದ್ದಾದಲ್ಲಿ ಅಕ್ರಮ ಸಿಹಿತಿಂಡಿ ತಯಾರಿಕಾ ಘಟಕಕ್ಕೆ ಬೀಗ; 20 ಟನ್ ಕೊಳೆತ ಆಹಾರ ಪದಾರ್ಥಗಳ ನಾಶ
‘ಇಸ್ಲಾಂ ಸ್ವೀಕರಿಸಿದ್ದು ನನ್ನ ಸ್ವಂತ ಇಚ್ಛೆಯಿಂದ’ ; ಲವ್ ಜಿಹಾದ್ ಆರೋಪವನ್ನು ತಳ್ಳಿಹಾಕಿದ ಆಯುಷ್ ಮಲಿಕ್ (ಮುಹಮ್ಮದ್ ಅಲಿ)
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಇಸ್ಲಾಂಪುರ ಹೆಸರನ್ನು ಶ್ರೀರಾಮಪುರ ಎಂದು ಬದಲಿಸಬೇಕು- ಬಿಜೆಪಿ ಶಾಸಕರ ಬೇಡಿಕೆಗೆ ಗ್ರಾಮಸ್ಥರ ವಿರೋಧ
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ: ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ
ಡೆಲಿವರಿ ಡ್ರೈವರ್ಗಳಿಗೆ ಹವಾನಿಯಂತ್ರಿತ ವಿಶ್ರಾಂತಿ ಕೇಂದ್ರಗಳು – ದುಬೈ ಆರ್ಟಿಎ ಕೊಡುಗೆ