janadhvani

Kannada Online News Paper

ಮಂಗಳೂರು “ತರ್ತೀಲ್ ಖುರ್’ಆನ್ ಅಕಾಡಮಿ” ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ

ಮಂಗಳೂರು: ತರ್ತೀಲ್ ಖುರ್’ಆನ್ ಅಕಾಡಮಿ ಮಂಗಳೂರು ವತಿಯಿಂದ ಮಕ್ಕಳಿಗಾಗಿ ‘ರಿಜುವೆನೈಝ್-2018’ ಬೇಸಿಗೆ ಶಿಬಿರವನ್ನು ಆಯೋಜಿಸಿದೆ.

‘ಈ ಬೇಸಿಗೆಯನ್ನು ವಿಶೇಷವಾಗಿ ಆನಂದಿಸಿ’ ಎಂಬ ಶೀರ್ಷಿಕೆಯಲ್ಲಿ 6 ರಿಂದ 14 ವರ್ಷ ಪ್ರಾಯದ ಮಕ್ಕಳಿಗಾಗಿ ರಜಾ ದಿನಗಳನ್ನು ನವಚೈತನ್ಯದೊಂದಿಗೆ ಕಳೆಯಲು April 16 ರಿಂದ 26ರ ತನಕ 10 ದಿವಸಗಳ ಆಕರ್ಷಕ ಬೇಸಿಗೆ ಶಿಬಿರ ನಡೆಯಲಿದೆ.

ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ 12 ಗಂಟೆ ತನಕ ನಡೆಯುವ ತರಬೇತಿಯ ವಿಶೇಷತೆಗಳು ಈ ಕೆಳಗಿನಂತಿದೆ

♦ ಸುಲಭ ಕುರ್’ಆನ್ ಪಾರಾಯಣ ಮತ್ತು ಗ್ರಹಿಸುವಿಕೆ

♦ ಆಧ್ಯಾತ್ಮಿಕತೆ

♦ ಬುದ್ದಿಮತ್ತೆ ಮತ್ತು ಗುರಿ ಸ್ಥಾಪಿಸುವಿಕೆ

♦ ಪ್ರಾಯೋಗಿಕ ಇಬಾದತ್

♦ ಸಂವಹನ ಕೌಶಲ್ಯ

ಕರಕೌಶಲ್ಯ , ಪ್ರತಿಭಾನ್ವೇಷಣೆ, ಫನ್ ಟೈಮ್ ಮುಂತಾಗಿ ಮಕ್ಕಳಿಗೆ ತಕ್ಕುದಾದ ತರಬೇತಿಗಳು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ/ ದಾಖಲಾತಿಗಾಗಿ -: 8550822478, 7259891545,9916831730, +966540608429

error: Content is protected !! Not allowed copy content from janadhvani.com